![ಪುತ್ತೂರು ರಸ್ತೆ ಅಪಘಾತ ಪ್ರಕರಣ; ತಿಂಗಳ ಹಿಂದೆ ಗಾಯಗೊಂಡಿದ್ದ 20 ವರ್ಷದ ಯುವತಿ ಮೃತ್ಯು ಪುತ್ತೂರು ರಸ್ತೆ ಅಪಘಾತ ಪ್ರಕರಣ; ತಿಂಗಳ ಹಿಂದೆ ಗಾಯಗೊಂಡಿದ್ದ 20 ವರ್ಷದ ಯುವತಿ ಮೃತ್ಯು](https://blogger.googleusercontent.com/img/b/R29vZ2xl/AVvXsEhXYU007TSVgaD1ZXkRcQZqMpEW7wT9HTv0CvWIcCAX9FKzeyVcjdQXSjfNP0bIJerzijauFf-ZGDExgt2kYZzMVmTAjBjXV420dfaj1pisNiIm5tRou5hSwIJWk8BHSbRoDUSGgGJ4S913T_KEndS_bsezAyw6YlGZ61rZOtlSqLQZN0gh2H_-4tToJeWV/s320/photo-removebg-preview.png)
ಪುತ್ತೂರು ರಸ್ತೆ ಅಪಘಾತ ಪ್ರಕರಣ; ತಿಂಗಳ ಹಿಂದೆ ಗಾಯಗೊಂಡಿದ್ದ 20 ವರ್ಷದ ಯುವತಿ ಮೃತ್ಯು
Saturday, May 25, 2024
ಪುತ್ತೂರು:
ಒಂದು ತಿಂಗಳ ಹಿಂದೆ ಪುತ್ತೂರಿನ ಕಬಕ ಸಮೀಪದ ಕೂವೆತ್ತಿಲ ಎಂಬಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಯುವತಿ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ.
ಬಂಟ್ವಾಳ
ತಾಲೂಕಿನ ಮಿತ್ತೂರು ಸಮೀಪದ ಸೂರ್ಯ ನಿವಾಸಿ ಲಿಂಗಪ್ಪ ಗೌಡ ಎಂಬವರ ಪುತ್ರಿ, ಪುತ್ತೂರಿನ ಖಾಸಗಿ ಕಾಲೇಜಿನ ಪದವಿ ವಿದ್ಯಾರ್ಥಿನಿ 20 ವರ್ಷದ ಮಂಜುಶ್ರೀ ಮೃತಪಟ್ಟ
ವಿದ್ಯಾರ್ಥಿನಿ.
ತಿಂಗಳ ಹಿಂದೆ ಕಬಕ ಸಮೀಪದ ಕೂವೆತ್ತಿಲ ಎಂಬಲ್ಲಿ ಕಾರು ಹಾಗೂ ಆಕ್ಟಿವಾ ಮಧ್ಯೆ ನಡೆದ ಅಪಘಾತದಲ್ಲಿ ಮಂಜುಶ್ರೀ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಆ ಬಳಿಕ ಅವರನ್ನು
ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಗಿತ್ತು.ಕೋಮಾ ಸ್ಥಿತಿಯಲ್ಲಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ