-->
1000938341
ಮಕ್ಕಳಿಗೆ ಹೆಚ್ಚು ಅಪಾಯಕಾರಿಯಾಗಿದೆ ಬಸವನಹುಳುವಿನಿಂದ ಬರುವ ಕಾಯಿಲೆ- ಇಯೊಸಿನೊಫಿಲಿಕ್ ಮೆನಿಂಗೊ ಎನ್ಸೆಫಾಲಿಟಿಸ್ ಬಗ್ಗೆ ನಿಮಗೆಷ್ಟು ಗೊತ್ತು

ಮಕ್ಕಳಿಗೆ ಹೆಚ್ಚು ಅಪಾಯಕಾರಿಯಾಗಿದೆ ಬಸವನಹುಳುವಿನಿಂದ ಬರುವ ಕಾಯಿಲೆ- ಇಯೊಸಿನೊಫಿಲಿಕ್ ಮೆನಿಂಗೊ ಎನ್ಸೆಫಾಲಿಟಿಸ್ ಬಗ್ಗೆ ನಿಮಗೆಷ್ಟು ಗೊತ್ತು

ಬಸವನಹುಳುಗಳಿಂದ ಹರಡುವ ಇಯೊಸಿನೊಫಿಲಿಕ್ ಮೆನಿಂಗೊ ಎನ್ಸೆಫಾಲಿಟಿಸ್ (ಇಎಂ) ದಕ್ಷಿಣ ಭಾರತದ ಮಕ್ಕಳಲ್ಲಿ ಪ್ರಚಲಿತದಲ್ಲಿರುವ ಗಂಭೀರ ಕಾಯಿಲೆಯಾಗಿದೆ.

 ಇದು ಮಕ್ಕಳ ಸಾವಿಗೆ ಅಥವಾ ಮಿದುಳಿನ ಶಾಶ್ವತ ಹಾನಿ ಅಥವಾ ನರ ಹಾನಿಗೆ ಕಾರಣವಾಗಬಹುದು ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.
ಮಿದುಳು ಮತ್ತು ಅದರ ಸುತ್ತಲಿನ ಅಂಗಾಂಶದ ಊರಿಯೂತದ ಪರಿಸ್ಥಿತಿಯನ್ನು ಈ ಇಎಂ ಹೊಂದಿದ್ದು, ಬಿಳಿ ರಕ್ತ ಕೋಶದ ವಿಧವಾದ ಇಯೊಸಿನೊಫಿಲ್‌ಗಳೊಂದಿಗೆ ಸಂಬಂಧ ಹೊಂದಿದೆ. ಈ ಪರಿಸ್ಥಿತಿಯು ಪರಾವಲಂಬಿ ಸೋಂಕುಗಳಿಗೆ ಸಂಬಂಧಿಸಿದ್ದಾಗಿದೆ. 

ಬಸವನ ಹುಳುವಿನಿಂದ ಬರುವ ಭಯಾನಕ ಕಾಯಿಲೆ : 
ಈ ಪರಾವಲಂಬಿ ಹುಳುವು ಇಲಿಗಳ ಶ್ವಾಸಕೋಶದ ಹುಳು ಆಂಜಿಯೋಸ್ಟ್ರಾಂಗ್ಲಿಲಸ್ ಕ್ಯಾಂಟೊನೆನ್ಸಿಸ್, ಹಾಗೂ ಬಸವನ ಹುಳುಗಳಲ್ಲಿ ಕಂಡುಬರುವ ಪರಾವಲಂಬಿ ಹುಳು ಆಗಿದೆ.
ಕೊಚ್ಚಿನ ಅಮೃತ ಆಸ್ಪತ್ರೆ 14 ವರ್ಷಗಳ ಅಧ್ಯಯನದಲ್ಲಿ ಬಸವನ ಹುಳು ಮತ್ತು ಇಎಂಗೆ ತೆರೆದುಕೊಳ್ಳುವಿಕೆ ನಡುವೆ ಗಮನಾರ್ಹ ಸಂಬಂಧ ಇರುವುದನ್ನು ಪತ್ತೆ ಹಚ್ಚಿದೆ. ಜೊತೆಗೆ ಬಸವನಹುಳುವಿಗೆ ನೇರ ತೆರೆದುಕೊಳ್ಳುವಿಕೆ ಇತಿಹಾಸ ಇರುವುದರ ಬಗ್ಗೆ ಮಕ್ಕಳನ್ನು ಪರೀಕ್ಷಿಸಿದಾಗ ಕಂಡು ಬಂದಿದೆ.

ಕಳೆದ ದಶಕದಿಂದ ಹೆಚ್ಚು ಕಂಡು ಬರುತ್ತಿದೆ :
ಕಳೆದೊಂದು ದಶಕದಿಂದ ವಿಶೇಷವಾಗಿ ಈ ಪ್ರದೇಶದಲ್ಲಿ ಮಕ್ಕಳಲ್ಲಿ ಇಎಂ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದಿದೆ. ಬಹುತೇಕ ಈ ಮಕ್ಕಳು ಆರಂಭಿಕವಾಗಿ ಕೆಲವು ವಾರಗಳ ಕಾಲ ಬ್ಯಾಕ್ಟಿರಿಯಾ, ವೈರಲ್ ಅಥವಾ ಕ್ಷಯರೋಗ ಮೆನಿಂಜೈಟಿಸ್‌ಗೆ ಒಳಗಾಗಿದ್ದಾರೆ. ಸೂಕ್ತ ತನಿಖೆ ಜೊತೆಗೆ ವೈದ್ಯಕೀಯ ಶಂಕೆಗಳು ಆರಂಭಿಕ ಪತ್ತೆಯು ಪ್ರಮುಖವಾಗಿದೆ ಎಂದು ಹೇಳಲಾಗುತ್ತದೆ.

ಸಾವಿಗೆ ಕಾರಣವಾಗಲಿದೆ ಈ ಸೋಂಕು:
 ಈ ಸೋಂಕು ಸಾವು ಅಥವಾ ಮಿದುಳಿನ ಶಾಶ್ವತ ಹಾನಿ ಅಥವಾ ನರಗಳಿಗೆ ಹಾನಿ ತರುವ ಸಾಮರ್ಥ್ಯವನ್ನು ಹೊಂದಿದೆ. ಕೊಳೆ ಮತ್ತು ಬಸವನಹುಳು ಸಂಚರಿಸಿದ ಪ್ರದೇಶವಿರುವ ಮಣ್ಣಿನಲ್ಲಿ ಮಕ್ಕಳು ಆಟವಾಡುವುದರಿಂದ ಮಕ್ಕಳಲ್ಲಿ ಸೋಂಕು ತಗುಲುವ ಸಾಧ್ಯತೆ ಇದೆ. ಈ ಹಿನ್ನಲೆ ಮನೆ ಸುತ್ತಮುತ್ತಲ ಪ್ರದೇಶಗಳ ಶುಚಿತ್ವ ಮತ್ತು ನೈರ್ಮಲ್ಯಕ್ಕೆ ಆದ್ಯತೆ ನೀಡುವ ಜೊತೆಗೆ ಸಲಾಡ್‌ನಂತಹ ಕಚ್ಚಾ ತರಕಾರಿಗಳನ್ನು ಸೇವಿಸುವ ಮುನ್ನ ಚೆನ್ನಾಗಿ ತೊಳೆಯಬೇಕು, ಹಾಗೂ ಸ್ವಚ್ಛವಾಗಿರುವಂತೆ ಮುಂಜಾಗ್ರತೆ ವಹಿಸಬೇಕು. ಆರೋಗ್ಯ ವೃತ್ತಿಪರರು ಈ ಬಗ್ಗೆ ಪೋಷಕರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂಬ ವಿಚಾರ ಅಧ್ಯಯನದ ಫಲಿತಾಂಶದಿಂದ ಜಾಗ್ರತೆ ವಹಿಸಲು ಪ್ರೇರಕವಾಗಿದೆ.

ಇಎಂ ಹೇಗೆ ಹರಡುತ್ತ ದೆ:
 ಹುಳುಗಳಿಗೆ ಮಾನವರು ಅತಿಥೇಯರಾಗಿರುತ್ತಾರೆ. ತರಕಾರಿಗಳ ಸೇವನೆ, ಕಲುಷಿತ ನೀರು ಕುಡಿಯುವುರಿಂದ ಸೋಂಕು ತಗುಲಬಹುದು. ಮಕ್ಕಳು ಹೆಚ್ಚು ದುರ್ಬಲರಾಗಿದ್ದು, ಬಸವನ ಹುಳುಗಳ ನೇರ ಸಂಪರ್ಕ ಅಥವಾ ಇದರ ಲಾರ್ವಾ ಹೊಂದಿರುವ ಆಟಿಕೆ ಅತವಾ ಆಹಾರಗಳ ಸೇವನೆಯಿಂದ ಸೋಂಕಿಗೆ ತುತ್ತಾಗುತ್ತಾರೆ. ಇದರ ಲಾರ್ವಾ ಕರುಳಿನಿಂದ ಮಿದುಳಿಗೆ ಸಾಗಿ ಇಎಂಗೆ ಕಾರಣವಾಗುತ್ತದೆ.
ಈ ರೋಗ ಬರುವ ಮತ್ತೊಂದು ಮಾರ್ಗ ಎಂದರೆ ಸಲಾಡ್‌ನ ತರಕಾರಿಗಳು ಸರಿಯಾಗಿ ಶುಚಿಯಾಗಿ ತೊಳೆಯದೇ ಸೇವಿಸುವುದರಿಂದ ಬರುವ ಸಾಧ್ಯತೆ ಇರುತ್ತದೆ.

ಹಲ್ಲಿಗಳು, ಏಡಿಗಳು, ಕಪ್ಪೆಗಳು ಮತ್ತು ಸೀಗಡಿಗಳ ಹಸಿಯಾಗಿ ತಿನ್ನುವುದು ಅಥವಾ ಬೇಯಿಸಿ ತಿನ್ನುವುದರಿಂದಲೂ ಇವು ಸೋಂಕು ತರುತ್ತದೆ ಎಂದು ತಿಳಿಸಿದ್ದಾರೆ. ಈ ಅಧ್ಯಯನವನ್ನು ಜರ್ನಲ್ ಪಿಡಿಯಾಟ್ರಿಕ್ ನ್ಯೂರೋಲಾಜಿಯಲ್ಲಿ ಪ್ರಕಟಿಸಲಾಗಿದೆ.

ಮಕ್ಕಳಿಗೆ ಅಪಾಯ ಹೆಚ್ಚು : 
 ಇದು ಮಾನ್ಸೂನ್ ನಂತರದ ತಿಂಗಳಲ್ಲಿ ಕೇರಳದಲ್ಲಿ ಆಫ್ರಿಕನ್ ಬಸವನಹುಳು ಹೆಚ್ಚಳದಿಂದ ಕಂಡು ಬರುತ್ತದೆ. ಕಳೆದ ಒಂದರಿಂದ ಎರಡು ದಶಕದಿಂದ ಈಚೆಗೆ ಇದು ಹೆಚ್ಚಿದೆ. ಈ ಪ್ರದೇಶದಲ್ಲಿ ವಾಸಿಸುವ ಮಕ್ಕಳಲ್ಲಿ ಇದು ಹೆಚ್ಚಿನ ಅಪಾಯವನ್ನು ತರುತ್ತದೆ ಎಂದು ಅಮೃತ ಆಸ್ಪತ್ರೆಯ ಮಕ್ಕಳ ನರರೋಗ ತಜ್ಞ ವಿಭಾಗದ ವೈಶಾಖ್ ಆನಂದ್‌ ತಿಳಿಸಿದ್ದಾರೆ.
ಅಧ್ಯಯನವೂ ತಿಳಿಸುವಂತೆ ಇದು ಮಕ್ಕಳಿಗೆ ಹೆಚ್ಚು ಹಾನಿಯನ್ನುಂಟು ಮಾಡುತ್ತದೆ

ಲಕ್ಷಣಗಳು ಏನು : 
ಜ್ವರ, ತಲೆನೋವು, ಕಿರಿಕಿರಿ, ಸ್ಟ್ರಿಂಟ್ ಮತ್ತು ಆರಂಭಿಕ ಪಾಪಿಲ್ಲೆಡೆಮಾ ಇದರ ಲಕ್ಷಣವಾಗಿದೆ. ಈ ಲಕ್ಷಣಗಳು 3 ರಿಂದ 42 ದಿನಗಳ ಕಾಲ ಕಾಡಲಿದೆ. 9 ರಿಂದ 41 ಪ್ರತಿಶತದವರೆಗೆ ಬಾಹ್ಯ ಇಯೊಸಿನೊಫಿಲಿಯಾವನ್ನು ಗಮನಿಸಲಾಗಿದೆ.

ಅಧ್ಯಯನಕ್ಕಾಗಿ 24 ಮಕ್ಕಳನ್ನು ಎಂಆರ್‌ಐಗೆ ಒಳಪಡಿಸಲಾಗಿದ್ದು, 62.5 ರಷ್ಟು ಮಕ್ಕಳಲ್ಲಿ ಸಾಮಾನ್ಯ ಫಲಿತಾಂಶ ಬಂದಿದೆ. 8.3 ರಷ್ಟು ಮಕ್ಕಳಲ್ಲಿ ಲೆಪ್ಲೊಮೆನಿಂಜಿಯಲ್ ವರ್ಧನೆ, ಶೇ 29.1ರಷ್ಟು ಮಕ್ಕಳಲ್ಲಿ ಅನಿರ್ದಿಷ್ಟ ಬದಲಾವಣೆಗಳನ್ನು ಕಂಡು ಬಂದಿದೆ. ಎಲ್ಲ ಮಕ್ಕಳು ಯಾವುದೇ ನರ ಸಮಸ್ಯೆ ಇಲ್ಲದೇ ಚೇತರಿಸಿಕೊಂಡಿದ್ದಾರೆ. ಅವರಿಗೆ ಅಂಡಜೋಲ್ ಮತ್ತು ಒರಲ್ ಸ್ಟಿರಿಯಾಡ್‌ಗಳನ್ನು ನೀಡಲಾಗಿದೆ. ಅವರನ್ನು ಮೊದಲ ತಿಂಗಳಿನಿಂದ ಐದು ವರ್ಷದವರೆಗೆ ಫಾಲೋಅಪ್ ಮಾಡಲಾಗಿದೆ. ಈ ಸಮಯದಲ್ಲಿ ಅವರಲ್ಲಿ ಸಮಸ್ಯೆ ಮರುಕಳಿಸಿಲ್ಲ. ಸಮಯಕ್ಕೆ ಸರಿಯಾಗಿ ಪತ್ತೆ ಮತ್ತು ಸರಿಯಾದ ನಿರ್ವಹಣೆಯಿಂದ ಉತ್ತಮ ಫಲಿತಾಂಶ ಕಂಡು ಬಂದಿದೆ.

Ads on article

Advertise in articles 1

advertising articles 2

Advertise under the article