ಮಂಗಳೂರು: ಸಂಚಾರದಲ್ಲಿದ್ದ ಬಸ್ ನಿಂದ ಬಿದ್ದು ಕಂಡೆಕ್ಟರ್ ಸಾವು

ಮಂಗಳೂರು: ಸಂಚಾರಲ್ಲಿದ್ದ ಬಸ್ ನ ಮುಂಬಾಗಿಲಲ್ಲಿದ್ದ ಸಿಟಿ ಬಸ್ ನಿರ್ವಾಹಕ ಆಯತಪ್ಪಿ ಬಿದ್ದು ಮೃತಪಟ್ಟಿರುವ ಘಟನೆ ಮಂಗಳೂರಿನ ನಂತೂರಿನಲ್ಲಿ ನಡೆದಿದೆ.

ಈರಯ್ಯ(23) ಮೃತಪಟ್ಟ ಸಿಟಿ ಬಸ್ ನಿರ್ವಾಹಕ.

ಮಂಗಳವಾರ ಮಧ್ಯಾಹ್ನದ ವೇಳೆಗೆ ಇವರ ಸಿಟಿ ಬಸ್ ಪದುವಾದಿಂದ ಶಿವಭಾಗ್ ಕಡೆ ಸಂಚರಿಸುತ್ತಿತ್ತು. ಈ ವೇಳೆ ನಂತೂರು ವೃತ್ತದ ಬಳಿ ಬಸ್ ಬಂದಾಗ ಬಸ್ಸಿನ ಮುಂಬಾಗಿಲ ಬಳಿ ನಿಂತಿದ್ದ ಈರಯ್ಯ ಏಕಾಏಕಿ ಆಯತಪ್ಪಿ ಬಿದ್ದಿದ್ದಾರೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಅವರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu