-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಸಂಬಂಧಿಕರ ಮನೆಗೆಂದು ತೆರಳಿದ ನಾಲ್ವರು ಸೋದರರು ನೀರುಪಾಲು: ಮೂವರು ಮೃತ್ಯು, ಓರ್ವ ನಾಪತ್ತೆ!

ಸಂಬಂಧಿಕರ ಮನೆಗೆಂದು ತೆರಳಿದ ನಾಲ್ವರು ಸೋದರರು ನೀರುಪಾಲು: ಮೂವರು ಮೃತ್ಯು, ಓರ್ವ ನಾಪತ್ತೆ!

ಒಡಿಶಾ: ಸಂಬಂಧಿಕರ ಮನೆಗೆಂದು ತೆರಳಿದ್ದ ನಾಲ್ವರು ಸೋದರರಲ್ಲಿ ಮೂವರು ನೀರು ಪಾಲಾಗಿ ಮತ್ತೋರ್ವ ನಾಪತ್ತೆಯಾಗಿರುವ ದುರಂತವೊಂದು ಒಡಿಶಾದಲ್ಲಿ ನಡೆದಿದೆ.

ಜಾರ್ಖಾಂಡ್ ನಿವಾಸಿ ಸಹೋದರರಾದ ರಿಶಿ ಸಾಹು, ಆಯುಷ್ ಸಾಹು, ಕುನಾಲ್ ಸಾಹು ಹಾಗೂ ಕೌಶಲ್ ಸಾಹು ದುರಂತ ಸಹೋದರರು.  ಇವರು ತಮ್ಮ ಪೋಷಕರೊಂದಿಗೆ ಒಡಿಶಾದ ರೂರ್ಕೇಲಾದ ಜಿರಿಪಾನಿ ಎಂಬಲ್ಲಿನ ಸಂಬಂಧಿಕರ ಮನೆಗೆ ಬಂದಿದ್ದರು.

ಅಲ್ಲಿಗೆ ಬಂದಿರುವ ಸಹೋದರರು ಕೋಯಲ್ ನದಿಗೆ ಸ್ನಾನಕ್ಕೆಂದು ಹೋಗಿದ್ದಾರೆ. ಈ ವೇಳೆ ನಾಲ್ವರೂ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದಾರೆ. ಈ ವೇಳೆ ಮೂವರನ್ನು ರಕ್ಷಣೆ ಮಾಡಲಾಯಿತಾದರೂ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. ಇದೀಗ ಇನ್ನೊಬ್ಬ ಸಹೋದರ ನಾಪತ್ತೆಯಾಗಿದ್ದಾನೆ. ಆತನಿಗಾಗಿ ಹುಡುಕಾಟ ಮುಂದುವರಿದಿದೆ.

Ads on article

Advertise in articles 1

advertising articles 2

Advertise under the article

ಸುರ