-->

ಕೋವಿಡ್ ಗೆ ಪುತ್ರ ಬಲಿ: ಸೊಸೆಗೆ ಮತ್ತೊಂದು ಮದುವೆ ಮಾಡಿಸಿ ಲಕ್ಷಾಂತರ ರೂ. ಬಂಗಲೆ ಉಡುಗೊರೆಯಾಗಿ ನೀಡಿದ ಅತ್ತೆ!

ಕೋವಿಡ್ ಗೆ ಪುತ್ರ ಬಲಿ: ಸೊಸೆಗೆ ಮತ್ತೊಂದು ಮದುವೆ ಮಾಡಿಸಿ ಲಕ್ಷಾಂತರ ರೂ. ಬಂಗಲೆ ಉಡುಗೊರೆಯಾಗಿ ನೀಡಿದ ಅತ್ತೆ!

ಧಾರ್​​(ಮಧ್ಯಪ್ರದೇಶ) : ಪತಿಯ ಮನೆಯವರ ಕಿರುಕುಳದಿಂದ ಎಷ್ಟೋ ಮಂದಿ ವಿವಾಹಿತ ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿರುವ, ತವರು ಮನೆ ಸೇರಿರುವ ನೂರಾರು ಪ್ರಕರಣಗಳು ನಮ್ಮ ಕಣ್ಮುಂದೆ ಇವೆ. ಆದರೆ, ಮಧ್ಯಪ್ರದೇಶದಲ್ಲೊಂದು ವಿಭಿನ್ನ ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ. ಕೋವಿಡ್​​ನಿಂದಾಗಿ ಪುತ್ರ ಮೃತಪಟ್ಟಿರುವ ಹಿನ್ನೆಲೆಯಲ್ಲಿ, ಅತ್ತೆಯೇ ಮುಂದೆ ನಿಂತು ಸೊಸೆಗೆ ಬೇರೊಂದು ಮದುವೆ ಮಾಡಿಸಿರುವ ಘಟನೆ ನಡೆದಿದೆ. ಅಲ್ಲದೆ ಲಕ್ಷಾಂತರ ರೂ. ಮೌಲ್ಯದ ಬಂಗಲೆಯನ್ನೂ ಉಡುಗೊರೆಯಾಗಿ ನೀಡಿದ್ದಾರೆ.

ಮಧ್ಯಪ್ರದೇಶದ ಧಾರ್​​​ ಎಂಬಲ್ಲಿ ಇಂತಹ ಅಪರೂಪದ ಘಟನೆಯೊಂದು ನಡೆದಿದೆ. ಸೊಸೆಯನ್ನು ಆಕೆಯ ಪತಿಯ ಮನೆಗೆ ಕಳುಹಿಸುವ ಸಂದರ್ಭ ಅತ್ತೆ ಕಣ್ಣೀರು ಹಾಕಿರುವ ಘಟನೆ ಸಹ ನಡೆದಿದೆ. ಧಾರ್​ ನಿವಾಸಿ ಪ್ರಿಯಾಂಕ್​ ತಿವಾರಿ 2021ರಲ್ಲಿ ರಿಚಾ ಎಂಬಕೆಯೊಂದಿಗೆ ಮದುವೆಯಾಗಿದ್ದನು. ಆದರೆ ಕಳೆದ ಎಪ್ರಿಲ್ ನಲ್ಲಿ ಪ್ರಿಯಾಂಕ್​ ಆರೋಗ್ಯದಲ್ಲಿ ಏರುಪೇರು ಉಂಟಾಗಿ, ಕೋವಿಡ್​ನಿಂದ ಮೃತಪಟ್ಟಿದ್ದಾನೆ.

ಆ ಬಳಿಕ ರಿಚಾ ತಮ್ಮ ಪುತ್ರಿಯೊಂದಿಗೆ ಅತ್ತೆ ಮನೆಯಲ್ಲೇ ಇದ್ದರು. ಈ ಮಧ್ಯೆ ರಿಚಾ ಅವರ ಮಾವ ಯುಗ್​ ತಿವಾರಿ ಸೊಸೆಗಾಗಿ ನೂತನ ಮನೆಯೊಂದನ್ನು ನಿರ್ಮಿಸಿದ್ದರು. ಇದೀಗ ಮಹಾರಾಷ್ಟ್ರದ ನಾಗ್ಪುರದಲ್ಲಿ ವಾಸವಾಗಿರುವ ಅರುಣ್​ ಮಿಶ್ರಾ ಅವರೊಂದಿಗೆ ಸೊಸೆ ರಿಚಾ ಮದುವೆ ಮಾಡಿಸಿ, ಆಕೆಗೋಸ್ಕರ ನಿರ್ಮಾಣ ಮಾಡಿದ ಹೊಸ ಮನೆ ಉಡುಗೊರೆಯಾಗಿ ನೀಡಿದ್ದಾರೆ. 

ರಿಚಾ ಬೇರೊಂದು ಮನೆಗೆ ಹೋಗುವಾಗ ತಿವಾರಿ ಕುಟುಂಬದ ಸದಸ್ಯರ ಕಣ್ಣು ತೇವಗೊಂಡವು. ಈ ವೇಳೆ ಅತ್ತೆ ರಾಗಿಣಿ ಅನೇಕ ಸಲ ಸೊಸೆಯನ್ನು ತಬ್ಬಿಕೊಂಡು ಕಣ್ಣೀರು ಸಹ ಹಾಕಿದ್ದಾರೆ. ಅಕ್ಷಯ ತೃತೀಯದಂದು ಈ ಮದುವೆ ಕಾರ್ಯಕ್ರಮ ನಡೆದಿದೆ.

Ads on article

Advertise in articles 1

advertising articles 2

Advertise under the article