-->

ಮಂಗಳೂರಿನಲ್ಲಿ ಮತ್ತೊಂದು ತಿಮಿಂಗಿಲ ವಾಂತಿ ಮಾರಾಟ ಯತ್ನ ಪ್ರಕರಣ ಬೇಧಿಸಿದ ಪೊಲೀಸರು: 2.20 ಕೋಟಿ ರೂ. ಸೊತ್ತಿನೊಂದಿಗೆ, ನಾಲ್ವರು ವಶಕ್ಕೆ

ಮಂಗಳೂರಿನಲ್ಲಿ ಮತ್ತೊಂದು ತಿಮಿಂಗಿಲ ವಾಂತಿ ಮಾರಾಟ ಯತ್ನ ಪ್ರಕರಣ ಬೇಧಿಸಿದ ಪೊಲೀಸರು: 2.20 ಕೋಟಿ ರೂ. ಸೊತ್ತಿನೊಂದಿಗೆ, ನಾಲ್ವರು ವಶಕ್ಕೆ

ಮಂಗಳೂರು: ಕಳೆದ ವಾರವಷ್ಟೇ 3.48 ಕೋಟಿ ರೂ. ಮೌಲ್ಯದ ತಿಮಿಂಗಿಲ ವಾಂತಿಯನ್ನು ಪತ್ತೆ ಹಚ್ಚಿ ಆರು ಮಂದಿಯನ್ನು ಬಂಧಿಸಿರುವ ಮಂಗಳೂರು ಪೊಲೀಸರು ಮತ್ತೊಂದು ಕೋಟ್ಯಂತರ ರೂ. ತಿಮಿಂಗಿಲ ವಾಂತಿ(ಅಂಬರ್ ಗ್ರೀಸ್)ಯನ್ನು ಮಾರಾಟ ಯತ್ನ ಪ್ರಕರಣವನ್ನು ಭೇದಿಸಿದ್ದಾರೆ. 


ನಗರದ ಜೆಪ್ಪಿನಮೊಗರು ಬಳಿ ಮಾರಾಟಕ್ಕೆ ಯತ್ನಿಸಿರುವ 2.20 ಕೋಟಿ ರೂ. ಮೌಲ್ಯದ ತಿಮಿಂಗಿಲ ವಾಂತಿಯೊಂದಿಗೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ‌. ಪ್ರಕರಣದಲ್ಲಿ ಕೊಡಗು ಹಾಗೂ ಕೇರಳ ಮೂಲದ ಜಾಬೀರ್ ಎಂ.ಎ.(35), ಆಸೀರ್ ವಿ.ಪಿ.(36), ಶರೀಫ್ ಎನ್.(32), ಶಬಾದ್ ಎಲ್.ಕೆ.(27) ಬಂಧಿತ ಆರೋಪಿಗಳು. 


ಆರೋಪಿಗಳು 2.20 ಕೋಟಿ ರೂ. ಮೌಲ್ಯದ ತಿಮಿಂಗಿಲ ವಾಂತಿಯನ್ನು ಮಾರಾಟಕ್ಕೆ ಯತ್ನಿಸುತ್ತಿರುವ ಬಗ್ಗೆ ಮಾಹಿತಿ ಪಡೆದಿರುವ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ, ಸೊತ್ತು ವಶಪಡಿಸಿಕೊಂಡಿದ್ದಾರೆ. ಬಂಧಿತರಿಂದ 5 ಮೊಬೈಲ್ ಫೋನ್ ಗಳ, 1 ಸ್ವಿಫ್ಟ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article