-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಮನೆಯಿಂದ ಓಡಿ ಹೋಗಿ ವಿವಾಹವಾದ ಜೋಡಿಗೆ ಕುಟುಂಬದವರಿಂದ ಎದುರಾಯ್ತು ಆತಂಕ: ಪೊಲೀಸ್ ಠಾಣೆಯ ಕದ ತಟ್ಟಿದ ನವದಂಪತಿ‌

ಮನೆಯಿಂದ ಓಡಿ ಹೋಗಿ ವಿವಾಹವಾದ ಜೋಡಿಗೆ ಕುಟುಂಬದವರಿಂದ ಎದುರಾಯ್ತು ಆತಂಕ: ಪೊಲೀಸ್ ಠಾಣೆಯ ಕದ ತಟ್ಟಿದ ನವದಂಪತಿ‌

ಮದನಪಲ್ಲಿ: ಪ್ರೀತಿಸುತ್ತಿದ್ದ ಜೋಡಿಯೊಂದು ಮನೆಯವರಿಗೆ ಹೇಳದೆ ಕೇಳದೆ ಓಡಿಹೋಗಿ ಮದುವೆಯಾಗಿತ್ತು. ಇದೀಗ ಬೆದರಿಕೆಯನ್ನೊಡ್ಡುತ್ತಿರುವ ಮನೆಯವರಿಗೆ ಹೆದರಿ ಪ್ರೇಮಿಗಳಿಬ್ಬರು ರಕ್ಷಣೆಯನ್ನು ಕೋರಿ ಪೊಲೀಸ್​ ಠಾಣೆಯ ಮೆಟ್ಟಿಲೇರಿರುವ ಘಟನೆ ಆಂಧ್ರ ಪ್ರದೇಶದ ಮದನಪಲ್ಲಿಯಲ್ಲಿ ನಡೆದಿದೆ. 

ಮದನಪಲ್ಲಿ ಪಟ್ಟಣದ ಕಿರಣ್​ (23) ಹಾಗೂ ಮದನಪಲ್ಲಿ ಗ್ರಾಮೀಣ ಭಾಗದ ಕುಸುಮಾ (22) ವಿವಾಹವಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಪ್ರೇಮಿಗಳು. 

ಕಿರಣ್ ಹಾಗೂ ಕುಸುಮಾ ಕಳೆದ 5 ವರ್ಷಗಳಿಂದ ಪರಸ್ಪರ ಪ್ರೀತಿಯ ಬಲೆಗೆ ಬಿದ್ದಿದ್ದರು. ಇಬ್ಬರೂ ಪ್ರೀತಿಸುತ್ತಿದ್ದ ಬಗ್ಗೆ ಎರಡೂ ಕುಟುಂಬಗಳಿಗೆ ತಿಳಿದಿತ್ತು. ಆದರೆ, ವಿವಾಹಕ್ಕೆ ಎರಡೂ ಕುಟುಂಬದಿಂದಲೂ ಒಪ್ಪಿಗೆ ಇರಲಿಲ್ಲ. 

ಈ ಹಿನ್ನೆಲೆಯಲ್ಲಿ ಸೋಮವಾರ ಮನೆ ಬಿಟ್ಟು ಓಡಿ ಹೋದ ಪ್ರೇಮಿಗಳಿಬ್ಬರು ಮದುವೆ ಆಗಿದ್ದಾರೆ. ಇದೀಗ ಪಾಲಕರ ವಿರೋಧದ ನಡುವೆ ನಾವಿಬ್ಬರೂ ಮದುವೆ ಆಗಿದ್ದೇವೆ. 

ಇದೀಗ ತಮಗೆ ಮನೆಯವರಿಂದ ಬೆದರಿಕೆ ಇದೆ ಎಂದು ನವದಂಪತಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಯ ಮೊರೆ ಹೋಗಿದ್ದಾರೆ. ಆದರೆ, ಎಸ್​ಪಿ ಕಚೇರಿಯ ಸಿಬ್ಬಂದಿ ಡಿಎಸ್​ಪಿ ಕಚೇರಿಗೆ ಹೋಗುವಂತೆ ಪ್ರೇಮಿಗಳಿಗೆ ಸಲಹೆ ನೀಡಿದ್ದಾರೆಂದು ತಿಳಿದು ಬಂದಿದೆ.

Ads on article

Advertise in articles 1

advertising articles 2

Advertise under the article

ಸುರ