ಆಳ್ವಾಸ್ ಆತ್ಮ ರಿಸರ್ಚ್ ಸೆಂಟರ್ ನೂತನ ಪ್ರಯೋಗಾಲಯ ಉದ್ಘಾಟನೆ
ಆಳ್ವಾಸ್ ಪಾರಂಪರಿಕ ಔಷಧ ಭಂಡಾರ ಮತ್ತು ಸಂಶೋಧನಾ ಕೇಂದ್ರದ (ಆತ್ಮ ರಿಸರ್ಚ್ ಸೆಂಟರ್) ಉನ್ನತೀಕರಿಸಿದ ನೂತನ ಪ್ರಯೋಗಾಲಯ ಉದ್ಘಾಟನೆ
ಮೂಡುಬಿದಿರೆ: ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಆಳ್ವಾಸ್ ಪಾರಂಪರಿಕ ಔಷಧ ಭಂಡಾರ ಮತ್ತು ಸಂಶೋಧನಾ ಕೇಂದ್ರದ (ಆತ್ಮ ರಿಸರ್ಚ್ ಸೆಂಟರ್) ಉನ್ನತೀಕರಿಸಿದ ನೂತನ ಪ್ರಯೋಗಾಲಯವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ ಎಂ. ಮೋಹನ್ ಆಳ್ವ ಬುಧವಾರ ಉದ್ಘಾಟಿಸಿದರು.
ಈ ಸಂಶೋದನಾ ಕೇಂದ್ರದ ಮೂಲಕ ವಿವಿಧ ಔಷಧೀಯ ಸಸ್ಯಗಳ ವಿಶೇಷ ಸಂಶೋದನೆ ಮಾಡಿ ಅದರಲ್ಲಿರುವ ರಾಸಾಯನಿಕ ಸಂಘಟನೆಗಳನ್ನು ವಿಘಟಿಸಿ, ಚಿಕಿತ್ಸೆಗೆ ಉಪಯೋಗಿಸುವ ಅಂಶಗಳನ್ನು ಸಂಗ್ರಹಿಸಿ, ಔಷಧಗಳ ಮೂಲಕ ಜನ ಸಾಮಾನ್ಯರಿಗೆ ತಲುಪುವಂತೆ ಮಾಡುವುದು ಇದರ ಉದ್ದೇಶವಾಗಿದೆ.
ಆತ್ಮ ರಿಸರ್ಚ್ ಸೆಂಟರ್ ನಿರ್ದೇಶಕ ಡಾ ಸುಬ್ರಮಣ್ಯ ಪದ್ಯಾಣ ಸ್ವಾಗತಿಸಿದರು. ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ ಸಜಿತ್ ಎಂ, ಆತ್ಮ ರಿಸರ್ಚ್ ಸೆಂಟರ್ ಸಂಯೋಜಕರಾದ ಡಾ ಸೌಮ್ಯ ಸರಸ್ವತಿ, ಡಾ ರೋಹನ್ ಫೆರ್ನಾಂಡೀಸ್, ಡಾ ಅಂಜಲಿ ಕುಮಾರಿ ಉಪಸ್ಥಿತರಿದ್ದರು.