-->

ಮಂಡ್ಯದಲ್ಲೂ ನಡೆಯಿತು ನೈತಿಕ ಪೊಲೀಸ್ ಗಿರಿ: ಬೈಕ್ ನಲ್ಲಿ ಹಿಂಬಾಲಿಸಿ ಅಡ್ಡಗಟ್ಟಿದ ತಂಡ

ಮಂಡ್ಯದಲ್ಲೂ ನಡೆಯಿತು ನೈತಿಕ ಪೊಲೀಸ್ ಗಿರಿ: ಬೈಕ್ ನಲ್ಲಿ ಹಿಂಬಾಲಿಸಿ ಅಡ್ಡಗಟ್ಟಿದ ತಂಡ

ಮಂಡ್ಯ: ದ.ಕ.ಜಿಲ್ಲೆಯಲ್ಲಿ ಅನ್ಯಕೋಮಿನ ಹುಡುಗ - ಹುಡುಗಿ ಜೊತೆಯಾಗಿ ಸಿಕ್ಕರೆ ನೈತಿಕ ಪೊಲೀಸ್ ಗಿರಿ ಹೆಚ್ಚಾಗಿ ನಡೆಯುತ್ತಿರುತ್ತದೆ. ಇದೀಗ ಸಕ್ಕರೆನಾಡು ನೈತಿಕ ಪೊಲೀಸ್ ಗಿರಿ ಮಂಡ್ಯದಲ್ಲೂ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

4 ದಿನಗಳ ಹಿಂದೆ ಅನ್ಯಕೋಮಿನ ಹುಡುಗ-ಹುಡುಗಿ ಬೈಕ್ ನಲ್ಲಿ ಹೋಗುತ್ತಿರುವುದನ್ನು ತಂಡವೊಂದು ಬೆನ್ನಟ್ಟಿ ತಡೆದು ನಿಲ್ಲಿಸಿದೆ. ಇಬ್ಬರನ್ನು ಬೈಕ್ ನಿಂದ ಕೆಳಗಿಳಿಸಿ ಅನ್ಯಕೋಮಿನ ಯುವಕನ ಮೇಲೆ ಹಲ್ಲೆಗೂ ಯತ್ನ ನಡೆದಿದೆ‌. ಸಂಘಟನೆಯೊಂದರ ಕಾರ್ಯಕರ್ತರಿಂದ ಈ ಕೃತ್ಯ ಎಸಗಿದೆ ಎನ್ನಲಾಗಿದೆ. 

ಮಂಡ್ಯ ತಾಲೂಕಿನ ಸುಂಡಹಳ್ಳಿ ಬಳಿ 4 ದಿನದ ಹಿಂದೆ ಈ ಪ್ರಕರಣ ನಡೆದಿದೆ.  ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿ ಅನ್ಯಕೋಮಿನ ಯುವಕನ‌ ಹಾಗೂ ಯುವತಿ ಬೈಕ್ ನಲ್ಲಿ ಹೋಗುತ್ತಿದ್ದರು. ಇದನ್ನು ನೋಡಿದ ಸಂಘಟನೆಯೊಂದರ ಕಾರ್ಯಕರ್ತರ ತಂಡ ಶ್ರೀರಂಗಪಟ್ಟಣದಿಂದ ಬೈಕ್​ ಅನ್ನು ಹಿಂಬಾಲಿಸಿಕೊಂಡು ಬಂದು ಮಂಡ್ಯದ ಸುಂಡಹಳ್ಳಿ ಬಳಿ ಬೈಕ್​ ಅಡ್ಡಗಟ್ಟಿದ್ದಾರೆ. 

ಕೆಲ ಕಾಲ ಇವರ ನಡುವೆ ಮಾತಿನ ಚಕಮಕಿ ನಡೆದಿದೆ. ಕೊನೆಗೆ ಯುವತಿಯ ಪೋಷಕರಿಗೆ ಕರೆ ಮಾಡಿದ ಕಾರ್ಯಕರ್ತರು ಆಕೆಯನ್ನು ಅವರ ವಶಕ್ಕೆ ಒಪ್ಪಿಸಿದ್ದಾರೆ. ಈ ಸಂದರ್ಭ ಯುವಕನಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

Ads on article

Advertise in articles 1

advertising articles 2

Advertise under the article