-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಜ್ಯೋತಿಷಿ ಮಾತು ಕೇಳಿ  ದಾವೂದ್‌ಗೆ ಸೇರಿದ 15 ಸಾವಿರ ಬೆಲೆ ಆಸ್ತಿ 2 ಕೋಟಿ ರೂ.ಗೆ ಖರೀದಿ!

ಜ್ಯೋತಿಷಿ ಮಾತು ಕೇಳಿ ದಾವೂದ್‌ಗೆ ಸೇರಿದ 15 ಸಾವಿರ ಬೆಲೆ ಆಸ್ತಿ 2 ಕೋಟಿ ರೂ.ಗೆ ಖರೀದಿ!

ಮುಂಬಯಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಸೇರಿದ ನಾಲ್ಕು ಆಸ್ತಿಗಳನ್ನು ಮಹಾರಾಷ್ಟ್ರದಲ್ಲಿ ಶುಕ್ರವಾರ ಹರಾಜು ಹಾಕಲಾಯಿತು.

 ಈ ಪೈಕಿ ರತ್ನಗಿರಿ ಜಿಲ್ಲೆಯ ಮುಂಬೇಕ್ ಗ್ರಾಮದಲ್ಲಿರುವ ಒಂದು ಆಸ್ತಿಯ ಸರಕಾರಿ ಮೀಸಲು ಬೆಲೆ 15,440 ರೂ. ಮಾತ್ರ. ದಾವೂದ್ ಆಸ್ತಿಯಾಗಿರುವುದರಿಂದ ಹರಾಜು ಕೂಗಲು ಹೆಚ್ಚಿನ ಜನರು ಮುಂದಾಗಲಿಲ್ಲ. ಕೇವಲ ಒಬ್ಬರು ಮಾತ್ರ ಹರಾಜಿನಲ್ಲಿ ಪಾಲ್ಗೊಂಡಿದ್ದರು. ಆದರೆ ಆಶ್ಚರ್ಯಕರವಾಗಿ ಈ ಆಸ್ತಿಯನ್ನು ವಕೀಲರೊಬ್ಬರು ಬರೋಬ್ಬರಿ 2 ಕೋಟಿ ರೂ. ನೀಡಿ ಖರೀದಿಸಿದ್ದಾರೆ.

 'ಗ್ರಾಮದಲ್ಲಿರುವ 170 ಚ.ಅಡಿಯ ಈ ಕೃಷಿ ಜಮೀನನ್ನು 2.01 ಕೋಟಿ ರೂ. ನೀಡಿ ಖರೀದಿಸಿದ್ದೇನೆ. ಸಂಖ್ಯಾಶಾಸ್ತ್ರದ ಪ್ರಕಾರ, ನಮ್ಮ ಜೋತಿಷಿ ಹೇಳಿದಂತೆ ಈ ಮೊತ್ತಕ್ಕೆ ನಾನು ಖರೀದಿ ಮಾಡಿದ್ದೇನೆ. ಭೂಪರಿವರ್ತನೆ ಆದ ಅನಂತರ ಇಲ್ಲಿ ಸನಾತನ ಶಾಲೆಯನ್ನು ನಿರ್ಮಿಸುತ್ತೇನೆ' ಎಂದು ವಕೀಲ ಅಜಯ್ ಶ್ರೀವಾಸ್ತವ ಹೇಳಿದರು. ಈ ಹಿಂದಿನ ಹರಾಜಿನಲ್ಲಿ ಕೂಡ ದಾವೂದ್‌ಗೆ ಸೇರಿದ ಮೂರು ಆಸ್ತಿಗಳನ್ನು ಅಜಯ್ ಖರೀದಿಸಿದ್ದರು.

Ads on article

Advertise in articles 1

advertising articles 2

Advertise under the article

ಸುರ