-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಜಾಮೀನು ಮೇಲೆ ಹೊರಬಂದಿರುವ ಅತ್ಯಾಚಾರ ಆರೋಪಿ ಸಂತ್ರಸ್ತೆಯನ್ನು ಅಟ್ಟಾಡಿಸಿ ಕೊಲೆಗೈದ

ಜಾಮೀನು ಮೇಲೆ ಹೊರಬಂದಿರುವ ಅತ್ಯಾಚಾರ ಆರೋಪಿ ಸಂತ್ರಸ್ತೆಯನ್ನು ಅಟ್ಟಾಡಿಸಿ ಕೊಲೆಗೈದ


ಹೊಸದಿಲ್ಲಿ: ಅತ್ಯಾಚಾರ ಮಾಡಿರುವಾತ ಹಾಗೂ ಆತನ ಸಹೋದರ ಸಂತ್ರಸ್ತೆಯನ್ನು ಅಟ್ಟಾಡಿಸಿ ಬೆನ್ನಟ್ಟಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಕೌಶಂಬಿ ಜಿಲ್ಲೆಯ ಡೇರಾ ಗ್ರಾಮದಲ್ಲಿ ನಡೆದಿದೆ.‌ ಕೆಲವು ದಿನಗಳ ಹಿಂದಷ್ಟೇ ಹಂತಕರಾದ ಅಶೋಕ್ ಹಾಗೂ ಪವನ್ ನಿಶಾದ್‌ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.

19ವರ್ಷದ ಈ ಯುವತಿ ಅಪ್ರಾಪ್ತೆಯಾಗಿದ್ದ ವೇಳೆ ಅಂದರೆ ಮೂರು ವರ್ಷಗಳ ಹಿಂದೆ ಆಕೆಯ ಮೇಲೆ ಅತ್ಯಾಚಾರಗೈದ ಆರೋಪ ಪವನ್‌ ನಿಶಾದ್‌ ಮೇಲಿತ್ತು. ಆ ಘಟನೆ ನಡೆದ ದಿನದಿಂದ ಪವನ್ ನಿಶಾದ್ ಹಾಗೂ ಆತನ ಸಹಚರರಿಂದ ಪ್ರಕರಣ ಕೈಬಿಡುವಂತೆ ಒತ್ತಡ ಹೇರಲು ಆಕೆಗೆ ಕಿರುಕುಳ ನೀಡುತ್ತಿದ್ದರು. ಪವನ್ ಸಹೋದರ ಅಶೋಕ್‌ ಬೇರೊಂದು ಕೊಲೆ ಪ್ರಕರಣದ ಆರೋಪಿಯಾಗಿದ್ದ. ಈತ ಈ ಕೊಲೆ ನಡೆಯುವುದಕ್ಕಿಂತ ಎರಡು ದಿನಗಳ ಹಿಂದೆಯಷ್ಟೇ ಬಿಡುಗಡೆಗೊಂಡಿದ್ದ. ಈ ಬಾರಿ ಹೇಗಾದರೂ ಯುವತಿಯ ಕುಟುಂಬದ ಮೇಲೆ ಒತ್ತಡ ಹೇರಿ ದೂರು ವಾಪಸ್‌ ಪಡೆಯುವ ಉದ್ದೇಶ ಅವರಿಗಿತ್ತು.

ಆದರೆ ಅವರು ಒಪ್ಪದಿದ್ದಾಗ, ಜಾನುವಾರುಗಳನ್ನು ಮೇಯಿಸಿ ವಾಪಸ್ ಕರೆತರುತ್ತಿದ್ದ ಸಂತ್ರಸ್ತೆಯನ್ನು ಅಟ್ಟಾಡಿಸಿ ಕೊಲೆಗೈಯ್ಯಲಾಗಿದೆ. ಯುವತಿಯನ್ನು ಮುಖ್ಯ ರಸ್ತೆಯಲ್ಲಿಯೇ ಕತ್ತಿಯಿಂದ ಕೊಚ್ಚಿ ಕೊಲೆಗೈದಿದ್ದಾರೆ. ಈ ದೃಶ್ಯವನ್ನು ಗ್ರಾಮಸ್ಥರು ಭಯಭೀತರಾಗಿ, ನಿಸ್ಸಹಾಯಕರಾಗಿ ನೋಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳಿಬ್ಬರೂ ತಲೆಮರೆಸಿಕೊಂಡಿದ್ದು ಪೊಲೀಸರು ಅವರಿಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

Ads on article

Advertise in articles 1

advertising articles 2

Advertise under the article

ಸುರ