-->
1000938341
ಸನಾತನ ಧರ್ಮ ಬಿಟ್ಟು ಉಳಿದೆಲ್ಲಾ ಧರ್ಮಗಳು ...: ಯೋಗಿ ಆದಿತ್ಯನಾಥ್

ಸನಾತನ ಧರ್ಮ ಬಿಟ್ಟು ಉಳಿದೆಲ್ಲಾ ಧರ್ಮಗಳು ...: ಯೋಗಿ ಆದಿತ್ಯನಾಥ್

ಲಖನೌ: ಸನಾತನ ಧರ್ಮದ ಕುರಿತು ಡಿಎಂಕೆ ನಾಯಕರಿಂದ ಕೇಳಿ ಬರುತ್ತಿರುವ ವಿವಾದಾತ್ಮಕ ಹೇಳಿಕೆಗಳಿಗೆ ಪ್ರತಿಕ್ರಿಯಿಸಿರುವ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್​ ಅವರು, ಸನಾತನವನ್ನು ಹೊರತುಪಡಿಸಿ ಉಳಿದೆಲ್ಲಾ ಧರ್ಮಗಳು ಪಂಥ ಹಾಗೂ ಪೂಜಾ ವಿಧಾನಗಳು ಎಂದಿದ್ದಾರೆ.

ಸಂತ ಮಹಾಂತ ದಿಗ್ವಿಜಯರವರ 54ನೇ ಪುಣ್ಯಸ್ಮರಣೆಯ ನಿಮಿತ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್ ಅವರು, ಸನಾತನ ಧರ್ಮದ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ವಿಪಕ್ಷಗಳ ಒಕ್ಕೂಟ ಇಂಡಿಯಾಕ್ಕೆ ಚಾಟಿ ಬೀಸಿದ್ದಾರೆ.

ಉತ್ತರಪ್ರದೇಶದ ಗೋರಖ್​ಪುರದಲ್ಲಿ ಆಯೋಜಿಸಲಾಗಿದ್ದ ಶ್ರೀಮದ್ ಭಾಗವತ ಕಥಾಜ್ಞಾನ ಯಾಗ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಯೋಗಿಯವರು, ಸನಾತನವು ಮಾನವೀಯತೆಯ ಧರ್ಮವಾಗಿದೆ. ಉಳಿದೆಲ್ಲವೂ ಪಂಥ ಹಾಗೂ ಪೂಜಾ ವಿಧಾನಗಳಿವೆ. ಒಂದು ವೇಳೆ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಿದ್ದಲ್ಲಿ ವಿಶ್ವದಾದ್ಯಂತ ಮಾನವೀಯತೆಯ ಬಿಕ್ಕಟ್ಟು ಉದ್ಭವಿಸಲಿದೆ ಎಂದು ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article