-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಕಾನ - ಬಾಳ ರಸ್ತೆಯಲ್ಲಿ ಶಾಸಕರ ಮುಖ ಕಾಣುತ್ತಿದೆ ರಸ್ತೆ ಕಳಪೆ ಕಾಮಗಾರಿಗೆ ಬಿ.ಕೆ ಇಮ್ತಿಯಾಝ್ ಆಕ್ರೋಶ

ಕಾನ - ಬಾಳ ರಸ್ತೆಯಲ್ಲಿ ಶಾಸಕರ ಮುಖ ಕಾಣುತ್ತಿದೆ ರಸ್ತೆ ಕಳಪೆ ಕಾಮಗಾರಿಗೆ ಬಿ.ಕೆ ಇಮ್ತಿಯಾಝ್ ಆಕ್ರೋಶ



ಸುರತ್ಕಲ್ : ಸುರತ್ಕಲ್ ಎಂ.ಆರ್.ಪಿ.ಎಲ್ 4.5ಕಿಮೀ ಚತುಷ್ಪತ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆ ಗುಣಮಟ್ಟದ್ದಾಗಿದ್ದು ರಸ್ತೆ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿರುವುದು ಸ್ಪಷ್ಟವಾಗಿ ಕಣ್ಣಿಗೆ ಕಾಣುತ್ತಿದ್ದರೂ ಶಾಸಕ ಭರತ್ ಶೆಟ್ಟಿ ಮೌನವಾಗಿದ್ದಾರೆ ರಸ್ತೆ ಕಾಂಕ್ರಿಟಿಕರಣಗೊಂಡು ತಿಂಗಳು ಆಗುವ ಮೊದಲೇ ಸಿಮೆಂಟ್ ಎದ್ದು ಹೋಗಿದೆ ಜಲ್ಲಿಗಳಲ್ಲಿ ಶಾಸಕರ ಮುಖ ಕಾಣುತ್ತಿದೆ ಎಂದು ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಝ್ ಆರೋಪಿಸಿದರು .

ಅವರು ಇಂದು ಸುರತ್ಕಲ್ ಕೊಂಕಣ ರೈಲ್ವೆ ಸೇತುವೆ ಅಕ್ಕಪಕ್ಕದ ರಸ್ತೆ ದುರವಸ್ಥೆ ಖಂಡಿಸಿ ಮತ್ತು ಕೊಂಕಣ ರೈಲ್ವೆ ರೋರೋ ಘಟಕ ಸ್ಥಳಾಂತರಕ್ಕೆ ಆಗ್ರಹಿಸಿ ಡಿವೈಎಫ್ಐ ಸುರತ್ಕಲ್ ಘಟಕ ಮತ್ತು ಸುರತ್ಕಲ್ ಗ್ರಾಮಾಂತರ ಅಟೋ ರಿಕ್ಷಾ ಚಾಲಕರ ಸಂಘ (ಸಿಐಟಿಯು) ನೇತೃತ್ವದಲ್ಲಿ ಚೊಕ್ಕಬೆಟ್ಟು ಕ್ರಾಸ್ ಬಳಿ ನಡೆದ ರಸ್ತೆ ತಡೆ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಸುರತ್ಕಲ್ ಎಂ.ಆರ್.ಪಿ.ಎಲ್ ಮುಖ್ಯ ರಸ್ತೆ ಜನರ ಹೋರಾಟದ ಪ್ರತಿಫಲವಾಗಿ ನಿರ್ಮಾಣಗೊಂಡಿರುವುದು ಷಟ್ಪಥ ರಸ್ತೆ ಆಗಬೇಕಿದ್ದ ರಸ್ತೆ ಆಗಬೇಕಿದ್ದ ರಸ್ತೆಯನ್ನು ಚತುಷ್ಪಥಗೊಳಿಸಿರುವುದೇ ಶಾಸಕ ಭರತ್ ಶೆಟ್ಟಿ ಸಾಧನೆ, ರಸ್ತೆಗೆ ಶಿಲಾನ್ಯ ಮಾಡಿ ಹೋದ ಶಾಸಕರು ರಸ್ತೆ ಅಭಿವೃದ್ಧಿಯ ಗುಣಮಟ್ಟ ಪರಿಶೀಲನೆ ಯಾಕೆ ಮಾಡಿಲ್ಲ ಎಂದು ಟೀಕಿಸಿದ ಅವರು ರಸ್ತೆ ಅಭಿವೃದ್ಧಿಯನ್ನು ಅಪೂರ್ಣ ಗೊಳಿಸಿ ರಸ್ತೆಗಳಲ್ಲಿ ಗುಂಡಿ ಬಿದ್ದಿರುವುದರಿಂದ ನಿತ್ಯ ಇಲ್ಲಿ ಅಪಘಾತ ನಡೆಯುತ್ತಿದೆ, ವಾಹನ ಸಂಚಾರಕ್ಕೆ ತೊಂದರೆ ಆಗಿದೆ ಕೊಂಕಣ ರೈಲ್ವೆ ರೋರೋ ಘಟಕಕ್ಕೆ ಬರುವ ಬೃಹತ್ ಲಾರಿಗಳಿಂದ ಇಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ ಕೂಡಲೇ ಸಮಸ್ಯೆ ಪರಿಹರಿಸಬೇಕೆಂದು ಆಗ್ರಹಿಸಿದರು.

ಡಿವೈಎಫ್ಐ ನಗರ ಉಪಾಧ್ಯಕ್ಷರಾದ ಶ್ರೀನಾಥ್ ಕುಲಾಲ್, ಅಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷರಾದ ಅಬ್ದುಲ್ ಬಷೀರ್ ಮಾತನಾಡಿದರು.
ಡಿವೈಎಫ್ಐ ಮುಖಂಡರಾದ ಶೈಫರ್ ಆಲಿ, ಬಿ.ಕೆ ಮಸೂದ್,ಮುಸ್ತಫಾ ಬೈಕಂಪಾಡಿ,  ಸಾದಿಕ್ ಕಿಲ್ಪಾಡಿ,ಮುನಾಜ್, ರಿಹಾಬ್, ಅಟೋ ರಿಕ್ಷಾ ಚಾಲಕರ ಸಂಘದ ಮುಖಂಡರಾದ ಲಕ್ಷ್ಮೀಶ್ ಕುಳಾಯಿ,ಸುಧೀರ್ ಕೋಡಿಕೆರೆ,ಸುನಿಲ್, ಗಣೇಶ್ ತೋಕೂರು, ಹಂಝ ಮೈಂದಗುರಿ, ಮೆಲ್ವಿನ್ ಪಿಂಟೋ, ನಾಗರಿಕ ಸಮಿತಿ ಮುಖಂಡರಾದ ಬಿ.ಎಂ ಅಬೂಸಾಲಿ ಕೃಷ್ಣಾಪುರ, ಫ್ರಾನ್ಸಿಸ್, ಮೆಹಬೂಬ್ ಖಾನ್, ಜಗದೀಶ್ ಕಾನ,ಬೀದಿಬದಿ ವ್ಯಾಪಾರಸ್ಥರ ಸಂಘದ ಮುಖಂಡರಾದ ಹನೀಫ್ ಇಡ್ಯ, ಸಲಾಂ ಕೊಲನಿ, ಶರೀಫ್ ಕಾನ ಉಪಸ್ಥಿತರಿದ್ದರು.

ಸುರ

Related Posts

Ads on article

Advertise in articles 1

advertising articles 2

Advertise under the article