-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಕಿರುಕುಳ ನೀಡಿದಾತನಿಗೆ ಚಪ್ಪಲಿಯಲ್ಲಿ ಹಿಡೆದ ಯುವತಿ: ಪಂಚಾಯತ್ ಸೂಚನೆ

ಕಿರುಕುಳ ನೀಡಿದಾತನಿಗೆ ಚಪ್ಪಲಿಯಲ್ಲಿ ಹಿಡೆದ ಯುವತಿ: ಪಂಚಾಯತ್ ಸೂಚನೆ


ಉತ್ತರಪ್ರದೇಶ: ತನ್ನದೇ ಗ್ರಾಮದ ವ್ಯಕ್ತಿಯೊಬ್ಬ ತನಗೆ ಕಿರುಕುಳ ನೀಡಿದ್ದಾ ಬಗ್ಗೆ ಹಾಪುರ್ ಜಿಲ್ಲೆಯ ಪಂಚಾಯತ್ ಗೆ ದೂರು ನೀಡಿದ್ದಾಳೆ. ಈ ಸಮಸ್ಯೆಗೆ ವಿಭಿನ್ನ ರೀತಿಯಲ್ಲಿ ತೀರ್ಪು ನೀಡಿದ ಪಂಚಾಯತ್, ಯುವಕನಿಗೆ ಚಪ್ಪಲಿಯಲ್ಲಿ ಹೊಡೆಯುವಂತೆ ಸೂಚಿಸಿದೆ.

ಅದರಂತೆ ಯುವತಿ ತನಗೆ ಕಿರುಕುಳ ನೀಡಿರುವ ಯುವಕನಿಗೆ ನಡುರಸ್ತೆಯಲ್ಲಿಯೇ ಚಪ್ಪಲಿಯಲ್ಲಿ ಬಾರಿಸಿದ್ದಾಳೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಆಕೆ ಸಾರ್ವಜನಿಕರ ಮುಂದೆಯೇ ಕಿರುಕುಳ ನೀಡುತ್ತಿದ್ದಾತನಿಗೆ ಹೊಡೆದಿದ್ದಾಳೆ. ಯುವತಿ ಕಾಲಿನಿಂದ ತನ್ನ ಚಪ್ಪಲಿಯನ್ನು ತೆಗೆದು, ರಪ್ಪರಪ್ಪನೇ ವ್ಯಕ್ತಿಯ ಕಪಾಳಕ್ಕೆ ಬಾರಿಸಿದ್ದಾಳೆ. ಈ ಶಿಕ್ಷೆಯನ್ನು ಸಾರ್ವಜನಿಕರ ಮುಂದೆ ಮತ್ತು ಪಂಚಾಯತ್ ಸದಸ್ಯರ ಸಮ್ಮುಖದಲ್ಲಿ ನೀಡಲಾಗಿದೆ.


ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದಂತೆ, ಈ ಬಗ್ಗೆ ಸ್ಥಳೀಯ ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ. ಪ್ರಸ್ತುತ ಈ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಬಹದ್ದೂರ್‌ಗಢ ಪೊಲೀಸ್ ಠಾಣೆಯ ಉಸ್ತುವಾರಿ ಸುಮಿತ್ ತೋಮರ್ ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article

ಸುರ