![ಸುರತ್ಕಲ್: ಶಾಲಾ ಬಾಲಕ ನೇಣಿಗೆ ಶರಣು - ಕಾರಣ ನಿಗೂಢ ಸುರತ್ಕಲ್: ಶಾಲಾ ಬಾಲಕ ನೇಣಿಗೆ ಶರಣು - ಕಾರಣ ನಿಗೂಢ](https://lh3.googleusercontent.com/-E7q9hvt-Z_4/Y-pNIMr4UQI/AAAAAAAATG4/aQQndgbp0D8tbS-XJf71z4elU5j9061vwCNcBGAsYHQ/s1600/1676299548367684-0.png)
ಸುರತ್ಕಲ್: ಶಾಲಾ ಬಾಲಕ ನೇಣಿಗೆ ಶರಣು - ಕಾರಣ ನಿಗೂಢ
Monday, February 13, 2023
ಸುರತ್ಕಲ್: ಇಲ್ಲಿಗೆ ಸಮೀಪದ ಕೃಷ್ಣಾಪುರ ಎಂಬಲ್ಲಿನ ಖಾಸಗಿ ಶಾಲಾ ವಿದ್ಯಾರ್ಥಿಯೋರ್ವನು ನೇಣಿಗೆ ಶರಣಾದ ಘಟನೆ ರವಿವಾರ ಮುಂಜಾನೆ ನಡೆದಿದೆ.
ಕಾಟಿಪಳ್ಳ ನಿವಾಸಿ ಹರ್ಷಿತ್ (13) ಮೃತಪಟ್ಟ ವಿದ್ಯಾರ್ಥಿ. ಹರ್ಷಿತ್ ವಾರಾಂತ್ಯದಲ್ಲಿ ಸೂರಿಂಜೆಯಲ್ಲಿರುವ ತನ್ನ ತಾತನ ಮನೆಗೆ ಹೋಗುವುದು ವಾಡಿಕೆ. ಈ ಬಾರಿಯೂ ಶಾಲೆ ಮುಗಿಸಿ ಶನಿವಾರ ತೆರಳಿದ್ದ ಹರ್ಷಿತ್ ರವಿವಾರ ತನ್ನ ತಾತನ ಮನೆಯಲ್ಲಿ ಮುಂಜಾನೆ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಅನಿರೀಕ್ಷಿತವಾಗಿ ಯಾವುದೋ ಕಾರಣಕ್ಕೆ ಮನನೊಂದು ಈ ಕೃತ್ಯ ಎಸಗಿರುವ ಸಾಧ್ಯತೆಯಿದೆ ಎಂದು ಈತನ ತಂದೆ ಸುಧಾಕರ ದೇವಾಡಿಗ ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.