-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಕೆನಾಡದ ಪಾರ್ಲಿಮೆಂಟ್ ನಲ್ಲಿ ಮೊಳಗಿದ ಕನ್ನಡ: ವೀಡಿಯೋ ನೋಡಿ

ಕೆನಾಡದ ಪಾರ್ಲಿಮೆಂಟ್ ನಲ್ಲಿ ಮೊಳಗಿದ ಕನ್ನಡ: ವೀಡಿಯೋ ನೋಡಿ

ಮಂಗಳೂರು: ನಾಡಿನೆಲ್ಲೆಡೆ ಕನ್ನಡ ಉಳಿಸಬೇಕು, ಬೆಳೆಸಬೇಕೆಂದು ದನಿ ಕೇಳುತ್ತಲೇ ಇದೆ. ಇದೀಗ ದೂರದ ಕೆನಡಾದ ಪಾರ್ಲಿಮೆಂಟ್ ನಲ್ಲಿಯೂ ಕನ್ನಡದ ದನಿಯೊಂದು ಮೊಳಗಿದೆ. ಇದರ ವೀಡಿಯೋ ತುಣುಕೊಂದು ಈಗ ವೈರಲ್ ಆಗಿದೆ.

ಹೌದು... ವಿದೇಶಿ ನೆಲದ ಪಾರ್ಲಿಮೆಂಟ್ ನಲ್ಲಿ ಕನ್ನಡ ಭಾಷೆಯೊಂದು ಕೇಳಿಸಿದೆಯೆಂದರೆ ಇದು ಅಚ್ಚರಿಯೇ ಸರಿ. ಕೆನಡಾದ ಒಟ್ಟಾವೊದ ಸಂಸದ ಚಂದ್ರ ಆರ್ಯ ಕೆನಡಾದ ಪಾರ್ಲಿಮೆಂಟ್ ನಲ್ಲಿ ಕನ್ನಡದಲ್ಲಿಯೇ ಮಾತನಾಡಿದ್ದಾರೆ. 59 ಸೆಕೆಂಡ್ ನ ಈ ವೀಡಿಯೋ ತುಣುಕು ಈಗ ವೈರಲ್ ಆಗಿದೆ.

"ಮಾನ್ಯ ಸಭಾಪತಿ ಕೆನಡಾ ದೇಶದ ಸಂಸತ್ತಿನಲ್ಲಿ ನನ್ನ ಮಾತೃಭಾಷೆ ಕನ್ನಡದಲ್ಲಿ ಮಾತನಾಡಲು ಅವಕಾಶ ದೊರಕಿರುವುದಕ್ಕೆ ಸಂತೋಷವಾಗುತ್ತಿದೆ" ಎಂದು ಹೇಳಿ ಮಾತು ಆರಂಭಿಸಿರುವ ಚಂದ್ರ ಆರ್ಯ ಅವರು, ಕನ್ನಡಿಗನೊಬ್ಬ ಕೆನಡದಾ ಸಂಸತ್ತಿನಲ್ಲಿ ತನ್ನ ಮಾತೃಭಾಷೆಯಲ್ಲಿ ಮಾತನಾಡುತ್ತಿರುವುದು ಸುಮಾರು 5ಕೋಟಿ ಕನ್ನಡಿಗರಿಗೆ ಹೆಮ್ಮೆಯ ಕ್ಷಣವಾಗಿದೆ ಎಂದಿದ್ದಾರೆ. ಕೊನೆಗೆ ಕುವೆಂಪು ಅವರ 'ಎಂದಾದರೂ ಇರು ಎಂತಾದರು ಇರು ಎಂದೆಂದಿಗೂ ಕನ್ನಡಿಗನಾಗಿರು' ಎಂಬ ಸಾಲನ್ನು ಹೇಳಿದ್ದಾರೆ. ನಿಜವಾಗಿಯೂ ಕನ್ನಡಿಗನೊಬ್ಬ ಕೆನಡಾದ ಪಾರ್ಲಿಮೆಂಟ್ ಸದಸ್ಯನಾಗಿರೋದು ಕನ್ನಡಿಗರಿಗೆ ಹೆಮ್ಮೆಯೇ ಸರಿ.



Ads on article

Advertise in articles 1

advertising articles 2

Advertise under the article

ಸುರ