-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಸಾಲ ತೀರಿಸಲು ಹೊಸ ತಂತ್ರ ಹೂಡಿದ ಎನ್ ಆರ್ ಐ ದಂಪತಿ: ಕೇರಳ ಸರಕಾರದಿಂದ ಶಾಕ್

ಸಾಲ ತೀರಿಸಲು ಹೊಸ ತಂತ್ರ ಹೂಡಿದ ಎನ್ ಆರ್ ಐ ದಂಪತಿ: ಕೇರಳ ಸರಕಾರದಿಂದ ಶಾಕ್

ತಿರುವನಂತಪುರಂ(ಕೇರಳ): ಹೊಸ ತಂತ್ರಗಾರಿಕೆಯ ತಮಗಿರುವ ಸಾಲವನ್ನು ತೀರಿಸಲೆಂದು ಹೊರಟ ಎನ್​ಆರ್​ಐ ದಂಪತಿಗೆ ಕೇರಳ ಸರಕಾರ ಶಾಕ್ ನೀಡಿದೆ. ಅವರು ತಮ್ಮ ಮನೆಯನ್ನು ಲಕ್ಕಿ ಡ್ರಾ ಮೂಲಕ ಮಾರಾಟಕ್ಕಿಟ್ಟಿದ್ದರು. ಆದರೆ, ಇದು ಕಾನೂನುಬಾಹಿರವೆಂದು ಕೇರಳ ಸರಕಾರ ಈ ಪ್ರಕ್ರಿಯೆಯನ್ನು ರದ್ದು ಮಾಡಲು ಆದೇಶಿಸಿದ್ದು, ದಂಪತಿಗೆ ನೋಟಿಸ್​ ಜಾರಿ ಮಾಡಿದೆ.

ತಿರುವನಂತಪುರಂನ ವಟ್ಟಿಯುರ್ಕಾವು ಎಂಬಲ್ಲಿನ ನಿವಾಸಿಗಳಾದ ಅಣ್ಣಾ ಹಾಗೂ ಜೋ ದಂಯ ಮನೆಯನ್ನು ಲಕ್ಕಿ ಡ್ರಾ ಮೂಲಕ ಮಾರಾಟ ಮಾಡಲು ಮುಂದಾಗಿದ್ದರು. ಆದರೆ ಲಾಟರಿ ನಡೆಸುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಅಲ್ಲದೆ, ಲಾಟರಿ ಪದ್ಧತಿ ನಿಷೇಧಿತವಾಗಿದ್ದು, ಇದನ್ನು ಸರ್ಕಾರ ಮಾತ್ರ ನಡೆಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಮನೆ ಮಾರಾಟವನ್ನು ನಿಲ್ಲಿಸುವಂತೆ ಎನ್​ಆರ್​ಐ ದಂಪತಿಗೆ ರಾಜ್ಯ ಲಾಟರಿ ಇಲಾಖೆ ನೋಟಿಸ್​ ಜಾರಿ ಮಾಡಿದೆ. 

ವಿದೇಶದಲ್ಲಿ ವೃತ್ತಿಯಲ್ಲಿದ್ದ ದಂಪತಿ ಕೋವಿಡ್​ ಬಳಿಕ ಸ್ವದೇಶಕ್ಕೆ ವಾಪಸ್ ಆಗಿ ಉದ್ಯಮ ನಡೆಸುತ್ತಿದ್ದರು. ಆದರೆ, ಅವರು ನಷ್ಟ ಅನುಭವಿಸಿದ್ದರು. ಪರಿಣಾಮ ಅವರಿಗೆ 34 ಲಕ್ಷ ರೂ. ಸಾಲವಾಗಿತ್ತು. ಇದನ್ನು ತೀರಿಸಲು ತಮ್ಮ 1300 ಚದರಡಿಯ ಮನೆ, 3 ಸೆಂಟ್ಸ್​ ಜಾಗವನ್ನು ಲಕ್ಕಿ ಡ್ರಾ ಮೂಲಕ ಮಾರಾಟಕ್ಕಿಟ್ಟಿದ್ದರು.

ಇದಕ್ಕಾಗಿ 3700 ಕೂಪನ್‌ಗಳನ್ನು ಮಾರಾಟ ಮಾಡಿ, ಇದರಿಂದ 74 ಲಕ್ಷ ರೂ.ಗಳನ್ನು ಸಂಗ್ರಹಿಸುವ ಆಲೋಚನೆ ಅವರದಾಗಿತ್ತು. ಒಂದು ಕೂಪನ್​ಗೆ ತಲಾ 2,000 ರೂ. ನಿಗದಿ ಮಾಡಿ, ಈಗಾಗಲೇ 200 ಕೂಪನ್‌ಗಳನ್ನು ಮಾರಾಟ ಮಾಡಿದ್ದರು. ಆದರೆ ಇದೀಗ ಲಾಟರಿ ಇಲಾಖೆಯ ಸೂಚನೆಯಿಂದಾಗಿ ಮಾರಾಟವನ್ನು ನಿಲ್ಲಿಸಬೇಕಾಗಿದೆ.

Ads on article

Advertise in articles 1

advertising articles 2

Advertise under the article

ಸುರ