-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ತಂಗಿಯ ಸಂಸಾರ ಸರಿಪಡಿಸಲೆಂದು ಹೋದ ಅಣ್ಣನ ದುರಂತ ಸಾವು: ಭಾವನೇ ಹಂತಕ!

ತಂಗಿಯ ಸಂಸಾರ ಸರಿಪಡಿಸಲೆಂದು ಹೋದ ಅಣ್ಣನ ದುರಂತ ಸಾವು: ಭಾವನೇ ಹಂತಕ!

ಕೋಲಾರ: ತಂಗಿಯ ಸಂಸಾರವನ್ನು ಸರಿ ಮಾಡಲೆಂದು ಹೋದ ಅಣ್ಣ, ಭಾವನಿಂದಲೇ ಹತ್ಯೆಯಾದ ದುರಂತವೊಂದು ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಗೌತಮನಗರದಲ್ಲಿ ಸಂಭವಿಸಿದೆ.

ತಂಗಿಯ ಪತಿ ಬಾಬು ಕೊಲೆಗೈದಿರುವ ಆರೋಪಿ. ಸುರೇಶ್​ (36) ಹತ್ಯೆಯಾದ ದುರ್ದೈವಿ. ಘಟನೆಯಲ್ಲಿ ಇವರ ಸಹೋದರ ಹರೀಶ್ (33) ಕೂಡಾ ಗಾಯಗೊಂಡಿದ್ದಾರೆ. 

ಹತ್ಯೆಯಾದ ಸುರೇಶ್ ಅವರ ತಂಗಿಯನ್ನು ಬಾಬು ವಿವಾಹವಾಗಿದ್ದ. ಪತಿ-ಪತ್ನಿ ನಡುವೆ ಹಲವಾರು ದಿನಗಳಿಂದ ಜಗಳ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ತಂಗಿಯ ಸಂಸಾರ ಸರಿಪಡಿಸಲೆಂದು ಸಹೋದರರಾದ ಸುರೇಶ್​ ಹಾಗೂ ಹರೀಶ್​ ತಂಗಿಯ ಪತಿ ಬಾಬು ಮನೆಗೆ ಬಂದಿದ್ದರು. 

ಈ ಸಂದರ್ಭ ಪತಿ - ಪತ್ನಿಯ ಜಗಳದ ವಿಚಾರವಾಗಿ ಸಹೋದರರು ಹಾಗೂ ಭಾವನ ನಡುವೆ ವಾಗ್ವಾದ ಉಂಟಾಗಿದೆ. ಮಾತಿಗೆ ಮಾತು ಬೆಳೆದ ಹಿನ್ನೆಲೆ ಮಾರಾಮಾರಿ ನಡೆದು ಸುರೇಶ್ ದುರಂತವಾಗಿ ಹತ್ಯೆಯಾಗಿದ್ದಾರೆ. ಘಟನೆಯಲ್ಲಿ ಹರೀಶ್ ಹಾಗೂ ಬಾಬು ಕೂಡ ಗಾಯಗೊಂಡಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. 

ಈ ಬಗ್ಗೆ ಸ್ಥಳಕ್ಕೆ ಬಂಗಾರಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Ads on article

Advertise in articles 1

advertising articles 2

Advertise under the article