-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಮಂಗಳೂರು: ಹನಿಟ್ರ್ಯಾಪ್ ಮಾಡಿ ಜ್ಯೋತಿಷಿಯಿಂದ 49 ಲಕ್ಷ ರೂ. ಪೀಕಿಸಿದ ಜೋಡಿ ಪೊಲೀಸ್ ಬಲೆಗೆ

ಮಂಗಳೂರು: ಹನಿಟ್ರ್ಯಾಪ್ ಮಾಡಿ ಜ್ಯೋತಿಷಿಯಿಂದ 49 ಲಕ್ಷ ರೂ. ಪೀಕಿಸಿದ ಜೋಡಿ ಪೊಲೀಸ್ ಬಲೆಗೆ


ಮಂಗಳೂರು: ಜ್ಯೋತಿಷಿಯೋರ್ವನನ್ನು ಹನಿಟ್ರ್ಯಾಪ್ ಮಾಡಿ ಬರೋಬ್ಬರಿ 49 ಲಕ್ಷ ರೂ. ಹಣ ದೋಚಿದ ಜೋಡಿಯೊಂದನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರಿನ ಪದವಿನಂಗಡಿ ನಿವಾಸಿಗಳಾದ ಕೊಡಗು ಮೂಲದ ಭವ್ಯಾ(30), ಹಾಸನ ಮೂಲದ ಕುಮಾರ್ ಅಲಿಯಾಸ್ ರಾಜು ಬಂಧಿತ ಆರೋಪಿಗಳು.

ಆರೋಪಿಗಳು ತಾವಿಬ್ಬರೂ ದಂಪತಿಗಳು ನಮ್ಮ ಮಧ್ಯೆ ಹೊಂದಾಣಿಕೆಯಿಲ್ಲ. ಆದ್ದರಿಂದ ನಮ್ಮ ಪದವಿನಂಗಡಿಯ ಮನೆಗೆ ಬಂದು ಪೂಜೆ ಮಾಡಬೇಕೆಂದು ಕರೆಸಿಕೊಂಡಿದ್ದಾರೆ. ಆ ಬಳಿಕ ಜ್ಯೋತಿಷಿಯು ಆರೋಪಿತೆ ಭವ್ಯಾ ಜೊತೆಗಿದ್ದ ವೀಡಿಯೋ, ಫೋಟೋಗಳು ಹಾಗೂ ಆಡಿಯೋಗಳನ್ನು ಇರಿಸಿಕೊಂಡು ಜ್ಯೋತಿಷಿಗೆ ಬ್ಲ್ಯಾಕ್ ಮೇಲ್ ಮಾಡಲು‌ ಆರಂಭಿಸಿದ್ದಾರೆ. ಈ ಮೂಲಕ ವೀಡಿಯೋ, ಫೋಟೋಗಳು ಹಾಗೂ ಆಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆಯನ್ನೊಡ್ಡಿ 15 ಲಕ್ಷ ರೂ. ನಗದು ಹಾಗೂ 34 ಲಕ್ಷ ರೂ. ಬೇರೆ ಬೇರೆ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ.


ಜ್ಯೋತಿಷಿ ಸಂಬಂಧಿಕರು, ಸ್ನೇಹಿತರಲ್ಲಿ ಸಾಲ ಪಡೆದು ಈ ಹಣವನ್ನು ನೀಡಿದ್ದ. ಆದರೂ ಮತ್ತೆ ಮತ್ತೆ ಹಣಕ್ಕೆ ಬೇಡಿಕೆಯಿಟ್ಟಿರುವುದರಿಂದ ಬೇಸತ್ತ ಜ್ಯೋತಿಷಿ ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ‌. ಆತ ನೀಡಿರುವ ದೂರಿನನ್ವಯ ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದ್ದು, ಹೆಚ್ಚಿನ ತನಿಖೆಗೆ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.

Ads on article

Advertise in articles 1

advertising articles 2

Advertise under the article

ಸುರ