-->

2 ಸಾವಿರ ರೂ. ಕೊಟ್ಟ ಗ್ರಾಹಕ: ಚಿಲ್ಲರೆಗೆ ಹೋದ ಅಂಗಡಿ ಮಾಲಕನಿಗೆ ಕಾದಿತ್ತು ಶಾಕ್

2 ಸಾವಿರ ರೂ. ಕೊಟ್ಟ ಗ್ರಾಹಕ: ಚಿಲ್ಲರೆಗೆ ಹೋದ ಅಂಗಡಿ ಮಾಲಕನಿಗೆ ಕಾದಿತ್ತು ಶಾಕ್

ಭುವನೇಶ್ವರ: ಗ್ರಾಹಕರು ಏನಾದರೂ ಖರೀದಿಸಿ 2 ಸಾವಿರ ರೂ. ಕೊಟ್ಟರೆ, ಚಿಲ್ಲರೆ ತರಲು ಹೊರಗಡೆ ಹೋಗುವ ಮುನ್ನ ಅಂಗಡಿಯ ಮಾಲಕರು ಗಲ್ಲಾಪೆಟ್ಟಿಗೆಯನ್ನು ಭದ್ರ ಮಾಡಿ ಹೋಗಬೇಕು. ಇಲ್ಲದಿದ್ದಲ್ಲಿ ಏನಾಗಬಹುದು ಎಂಬುದಕ್ಕೆ ಈ ಒಂದು ಘಟನೆಯೊಂದು ತಾಜಾ ಉದಾಹರಣೆಯಾಗಿದೆ. 

ಒಡಿಶಾ ರಾಜ್ಯದ ರಾಜಧಾನಿ ಭುವನೇಶ್ವರದಲ್ಲಿನ ದಿನಸಿ ಅಂಗಡಿಗೆ ದುಷ್ಕರ್ಮಿಯೊಬ್ಬ ಬಂದಿದ್ದಾನೆ.  ವಸ್ತುವೊಂದನ್ನು ಖರೀದಿಸಿ 2 ಸಾವಿರ ರೂ. ನೋಟು ನೀಡಿದ್ದಾನೆ. ಆದರೆ, ಅಂಗಡಿ ಮಾಲಕನ ಬಳಿ ಚಿಲ್ಲರೆ ಇರಲಿಲ್ಲ. ಇಲ್ಲೇ ನಿಂತಿರಿ ಈಹ ಚಿಲ್ಲರೆ ಪಡೆದು ಬರುತ್ತೇನೆಂದು ಹೇಳಿ ಮಾಲಕ ಹೊರ ಹೋಗಿದ್ದಾನೆ.

ಆತ ಚಿಲ್ಲರೆ ಪಡೆದು ಮರಳಿ ಬಂದರೆ ಅಂಗಡಿಯ ಮುಂದೆ 2 ಸಾವಿರ ರೂ. ನೋಟ್ ಕೊಟ್ಟಾತ ಇರಲಿಲ್ಲ. ಏನಾಗಿರಬಹುದೆಂದು ಅಂಗಡಿ ಒಳಗೆ ಬಂದು ನೋಡಿದಾಗ ಮಾಲಕನಿಗೆ ಬಹುದೊಡ್ಡ ಶಾಕ್ ಕಾದಿತ್ತು. 

ಮಾಲಕ ಚಿಲ್ಲರೆ ಪಡೆದು ಬರುವಷ್ಟರಲ್ಲಿ ಆ ದುಷ್ಕರ್ಮಿಯು ಗಲ್ಲಾಪೆಟ್ಟಿಗೆಯಲ್ಲಿದ್ದ ಹಣವನ್ನೆಲ್ಲ ಸುಲಿಗೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾನೆ. ಈ ರೀತಿಯ ಘಟನೆ ಭುವನೇಶ್ವರದ ಸತ್ಯನಗರ ಏರಿಯಾದಲ್ಲಿ ಎರಡನೇ ಬಾರಿಗೆ ಆಗುತ್ತಿದೆ ಎನ್ನಲಾಗಿದೆ.

ಘಟನೆಯ ಸಂಬಂಧ ಅಂಗಡಿ ಮಾಲಕ ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article