-->

ಶಾರುಖ್ ಖಾನ್ ಜೊತೆ ನಟಿಸಲು ದೊರಕಿರುವ ಅವಕಾಶ ತಿರಸ್ಕರಿಸಿದ ಸಮಂತಾ: ಕಾರಣ ಇದು?

ಶಾರುಖ್ ಖಾನ್ ಜೊತೆ ನಟಿಸಲು ದೊರಕಿರುವ ಅವಕಾಶ ತಿರಸ್ಕರಿಸಿದ ಸಮಂತಾ: ಕಾರಣ ಇದು?

ಹೈದರಾಬಾದ್ (ತೆಲಂಗಾಣ) : ತಾರಾ ದಂಪತಿ ಸಮಂತಾ ಹಾಗೂ ನಾಗಚೈತನ್ಯ ಅವರು ವಿಚ್ಛೇದನ ಪಡೆದ ಬಳಿಕವೂ ಟಾಲಿವುಡ್​​ನಲ್ಲಿ ಹತ್ತು ಹಲವು ಊಹಾಪೋಹಗಳು ಹರಿದಾಡುತ್ತಿವೆ. ಆದರೆ, ಇಬ್ಬರೂ ತಮ್ಮ ಡಿವೋರ್ಸ್ ಗೆ ಕಾರಣವೇನು ಎಂಬುದನ್ನು ಈವರೆಗೂ ಬಹಿರಂಗವಾಗಿ ಹೇಳಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ನಟಿ ಸಮಂತಾ ಅವರ ಕಾರಣದಿಂದಲೇ ಈ ಸಂಬಂಧ ಮುರಿದು ಬಿತ್ತು ಎಂದು ಬಿಂಬಿಸಲಾಗುತ್ತಿದೆ. ಆದರೆ, ಇದು ಸತ್ಯಕ್ಕೆ ದೂರ ಅನ್ನೋದನ್ನು ಸಮಂತಾ ಆಪ್ತ ಸ್ನೇಹಿತೆಯೊಬ್ಬರು ಇತ್ತೀಚೆಗೆ ಬಹಿರಂಗಪಡಿಸಿದ್ದರು.  ಸಮಂತಾ ಮಗು ಹೊಂದಲು ಇಚ್ಛಿಸದ ಕಾರಣಕ್ಕೆ ಈ ದಾಂಪತ್ಯ  ಸಂಬಂಧ ಮುರಿದು ಬಿತ್ತು 
ಎಂಬುದು ಸತ್ಯಕ್ಕೆ ದೂರವಾದ ಮಾತು. ಜಾಲತಾಣಗಳಲ್ಲಿ  ಸಮಂತಾ-ನಾಗಚೈತನ್ಯರ ಬಗ್ಗೆ ಹರಿದಾಡುತ್ತಿರುವ ವದಂತಿಗಳಿಗೆ ಅಭಿಮಾನಿಗಳು ಕಿವಿಕೊಡಬಾರದು ಎಂದು ಅವರ ಸ್ನೇಹಿತೆ ಮನವಿ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಅವರು ಕುಟುಂಬಕ್ಕಾಗಿ ಸಮಂತಾ ತೆಗೆದುಕೊಂಡ ನಿರ್ಧಾರದ ಬಗ್ಗೆಯೂ ಬಹಿರಂಗಪಡಿಸಿದ್ದಾರೆ ಬಾಲಿವುಡ್​ ಬಾದ್​ಷಾ ಶಾರುಖ್ ಖಾನ್ ನಾಯಕನಾಗಿ ನಟಿಸಬೇಕಿದ್ದ​ 'ಲಯನ್' ಎಂಬ ಬಿಗ್​ ಬಜೆಟ್ ಚಿತ್ರದಲ್ಲಿ ಸಮಂತಾಗೆ ಆಫರ್​ ಬಂದಿತ್ತು. ಬಿಗಿಲ್, ಮೆರ್ಸಲ್​ ಹಾಗೂ ತೇರಿ ಸಿನಿಮಾಗಳಿಗೆ ಆ್ಯಕ್ಷನ್​ ಕಟ್​ ಹೇಳಿದ್ದ ಅಟ್ಲೀ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ‌. ಅವರು ಈ ಚಿತ್ರದಲ್ಲಿ ನಟಿದುವಂತೆ ನಾಯಕಿಯಾಗಿ ಸಮಂತಾ ಅವರನ್ನು ಮೊದಲು ಸಂಪರ್ಕ ಮಾಡಿದ್ದರಂತೆ. 

ಆದರೆ, ನಾಗ ಚೈತನ್ಯ ಅವರ ಮಗುವಿನ ತಾಯಿ ಆಗಬೇಕು, ಕುಟುಂಬ ಬೆಳೆಯಬೇಕು ಎಂಬ ಉದ್ದೇಶದಿಂದ ಸಮಂತಾ ಈ ಅವಕಾಶವನ್ನು ನಿರಾಕರಿಸಿದ್ದರಂತೆ. ಬಳಿಕ ಈ ಪಾತ್ರಕ್ಕೆ ನಟಿ ನಯನತಾರಾ ಅವರನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಚಿತ್ರ ತಂಡ ಯಶಸ್ವಿ ಚಿತ್ರೀಕರಣ ನಡೆಸುತ್ತಿದೆ ಅನ್ನೋದು ಸದ್ಯದ ಮಾಹಿತಿ. ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ಮಾತ್ರ ನಟಿ ಸಮಂತಾ ಆಗಾಗ ಕಿಡಿ ಕಾರುತ್ತಲೇ ಇದ್ದಾರೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article