-->

ಮಂಗಳೂರು-ಮಿಥುನ್ ರೈ ಪರ ಪೋಸ್ಟ್ ವಿವಾದ- ಮೂಡುಶೆಡ್ಡೆಯಲ್ಲಿ ತಲವಾರು ಝಳಪಿಸಿದ ತಂಡ- ಮುಂದೇನಾಯಿತು ? ಈ ವಿಡಿಯೋ ನೋಡಿ

ಮಂಗಳೂರು-ಮಿಥುನ್ ರೈ ಪರ ಪೋಸ್ಟ್ ವಿವಾದ- ಮೂಡುಶೆಡ್ಡೆಯಲ್ಲಿ ತಲವಾರು ಝಳಪಿಸಿದ ತಂಡ- ಮುಂದೇನಾಯಿತು ? ಈ ವಿಡಿಯೋ ನೋಡಿ

 


 

ಮಂಗಳೂರು:  ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಮುಖಂಡ ಮಿಥುನ್ ರೈ ಪರ ಪೋಸ್ಟ್ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ತಂಡಗಳ ನಡುವೆ ಘರ್ಷಣೆ ನಡೆದಿದ್ದು ಐವರನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.


ಮಂಗಳೂರಿನ ಮೂಡುಶೆಡ್ಡೆಯಲ್ಲಿ ಈ ಘಟನೆ ನಡೆದಿದೆ.  ಇಲ್ಲಿನ ಅಷ್ಪಕ್ ಎಂಬಾತ ಕಾಂಗ್ರೆಸ್ ಮುಖಂಡ ಮಿಥುನ್ ರೈ ಪರ ಪೋಸ್ಟ್ ಗಳನ್ನು ಹಾಕುತ್ತಿದ್ದ. ಇದಕ್ಕೆ ಸಂಬಂಧಿಸಿದಂತೆ    ವಿವೇಕಾನಂದ ಎಂಬಾತ ಅಷ್ಟಕ್ ಜೊತೆಗೆ ತಗಾದೆ ತೆಗೆದಿದ್ದ. ಅವರ ನಡುವೆ ಚಕಮಕಿ ನಡೆದು ವಿವೇಕಾನಂದ ಅಸ್ಪಕ್ ಗೆ ಹಲ್ಲೆಯನ್ನು ನಡೆಸಿದ್ದ.




 

ಈ ಘಟನೆಯ ಮರುದಿನ ಅಷ್ಪಕ್ ತನ್ನ ತಂಡದೊಂದಿಗೆ ವಿವೇಕಾನಂದನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.  ವಿವೇಕಾನಂದ ಅಂಗಡಿಯೊಂದಕ್ಕೆ ಬರುತ್ತಿರುವ ಮಾಹಿತಿ ಪಡೆದ ಈ ತಂಡ ಅಲ್ಲಿ ಹೋಗಿ ಹಲ್ಲೆ ನಡೆಸಲು ಯತ್ನಿಸಿತ್ತು. ಆದರೆ ವಿವೇಕಾನಂದ ಅಂಗಡಿಯೊಳಕ್ಕೆ ಹೋಗಿ ತಪ್ಪಿಸಿಕೊಂಡಿದ್ದ. ಈ ತಂಡ ತಲವಾರು ಝಳಪಿಸಿ ಬೆದರಿಕೆ ಹಾಕಿ ಹೋಗಿದೆ. ಇದನ್ನು ಯುವತಿಯೊಬ್ಬಳು ವಿಡಿಯೋ ಮಾಡಿದ್ದಳು.


 

ಈ ಘಟನೆಯ ಬಳಿಕ ಇತ್ತಂಡಗಳಿಂದ ದೂರು ದಾಖಲಾಗಿದ್ದು ಪೊಲೀಸರು ತಲವಾರು ಝಳಪಿಸಿದ ಐವರನ್ನು ಬಂಧಿಸಿದ್ದಾರೆ. ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Ads on article

Advertise in articles 1

advertising articles 2

Advertise under the article