-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
Kukke Champa Shasti Rathotsava | ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಂಭ್ರಮ-ಸಡಗರದ ಚಂಪಾಷಷ್ಠಿ: ರಥೋತ್ಸವಕ್ಕೆ ಸಾಕ್ಷಿಯಾದ ಭಕ್ತಸಾಗರ

Kukke Champa Shasti Rathotsava | ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಂಭ್ರಮ-ಸಡಗರದ ಚಂಪಾಷಷ್ಠಿ: ರಥೋತ್ಸವಕ್ಕೆ ಸಾಕ್ಷಿಯಾದ ಭಕ್ತಸಾಗರ





ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ 15 ದಿನಗಳ ಕಾಲ ನಡೆಯುವ ವೈಭವದ ಚಂಪಾಷಷ್ಠಿ ಮಹೋತ್ಸವ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಪನ್ನಗೊಂಡಿತು.



ಷಷ್ಠಿಯ ದಿನ ದೇವರ ದಿವ್ಯ ಬ್ರಹ್ಮರಥೋತ್ಸವ ಎಳೆಯಲಾಗುತ್ತದೆ. ಈ ಬ್ರಹ್ಮರಥ ಕಟ್ಟುವುದೇ ಒಂದು ವಿಶೇಷತೆಯಿಂದ ಕೂಡಿದ ಕಾರ್ಯ. ಸಾಮಾನ್ಯವಾಗಿ ರಥವನ್ನು ನೈಲಾನ್ ಅಥವಾ ಇತರ ಹಗ್ಗದೊಂದಿಗೆ ಕಟ್ಟಲಾಗುತ್ತದೆ. 



ಆದರೆ, ಈ ಬ್ರಹ್ಮರಥವನ್ನು ಎಳೆಯಲು ಹಗ್ಗವನ್ನು ಬಳಸುವಂತಿಲ್ಲ. ಬಿದಿರು ಹಾಗೂ ನಾಗರಬೆತ್ತವನ್ನು ಬಳಸಿಕೊಂಡು ರಥವನ್ನು ಕಟ್ಟಿರುವುದು ವಿಶೇಷ. ಈ ಕಾರ್ಯವನ್ನು ಸ್ಥಳಿಯ ಮಲೆ ಕುಡಿಯರು ಅತ್ಯಂತ ಭಕ್ತಿ ಮತ್ತು ಶ್ರದ್ಧೆಯಿಂದ ನಿರ್ವಹಿಸುತ್ತಾರೆ.











ಚಂಪಾಷಷ್ಠಿ ವಾರ್ಷಿಕ ಜಾತ್ರೆ ಪ್ರಯುಕ್ತ ಮಾರ್ಗಶಿರಾ ಶುದ್ಧ ಪಂಚಮಿಯ ದಿನದಂದು ಪಲ್ಲಕ್ಕಿ ಪೂಜೆ, ರಾತ್ರಿ ತೈಲಾಭ್ಯಂಜನ ಮತ್ತು ಮಧ್ಯರಾತ್ರಿ ಪಂಚಮಿ ರಥೋತ್ಸವ ನಡೆಯುತ್ತದೆ. 


ಈ ಸಂದರ್ಭದಲ್ಲಿ ಆಕರ್ಷಕ ಬೆಡಿ ಉತ್ಸವವೂ ಜರುತ್ತದೆ. ಬೆಳಿಗ್ಗೆ ಬ್ರಹ್ಮರಥೋತ್ಸವ ಸಡಗರ ಸಂಭ್ರಮದಿಂದ ನಡೆಯಿತು. ಭಕ್ತಜನಸಾಗರ ಈ ಮಹಾ ಸಂಭ್ರಮವನ್ನು ಕಣ್ತುಂಬಿಕೊಂಡಿತು.

Ads on article

Advertise in articles 1

advertising articles 2

Advertise under the article

ಸುರ