ಕಾರ್ಕಳ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ್ ರಾವ್ ಅಧಿಕಾರ ಸ್ವೀಕಾರ


ಕಾರ್ಕಳ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಶ್ರೀ ಪ್ರಶಾಂತ್ ರಾವ್ ಎಂ ವಿ ಸಹಾಯಕ ಕಾರ್ಯದರ್ಶಿ  ಜಿಲ್ಲಾ ಪಂಚಾಯತ್ ಉಡುಪಿ  ಇವರು  ಹೆಚ್ಚುವರಿ ಪ್ರಭಾರ   ವಹಿಸಿ ಕೊಂಡಿರುತ್ತಾರೆ.

 ಕಾರ್ಯನಿರ್ವಾಹಕ ಅಧಿಕಾರಿ ಅವರನ್ನು  ಕಾರ್ಕಳ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕರಾದ ಶ್ರೀ ಕೃಷ್ಣಾನಂದ  ರವರು ಸ್ವಾಗತಿಸಿದರು. ಸಹಾಯಕ ನಿರ್ದೇಶಕರಾದ   ಶ್ರೀ ರಮೇಶ್ ವ್ಯವಸ್ಥಾಪಕರಾದ ಶ್ರೀ ಹರೀಶ್  ಹಾಗೂ ತಾಲೂಕ್ ಪಂಚಾಯತಿ ಸಿಬ್ಬಂದಿಯವರು ಉಪಸ್ಥಿತರಿದ್ದರು .

ಕಾರ್ಕಳ ತಾಲೂಕು ಪಂಚಾಯಿತಿನ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ  ಹೆಬ್ರಿ  ತಾಲೂಕು  ಪಂಚಾಯತ್  ಕಾರ್ಯನಿರ್ವಾಹಕ ಅಧಿಕಾರಿಯಾದ  ಶ್ರೀ ಶಶಿಧರ್ ಕೆ ಜಿ  ರವರು ಶಿವಮೊಗ್ಗ ಜಿಲ್ಲೆ  ಸೊರಬ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಯಾಗಿ ವರ್ಗಾವಣೆ ಹೊಂದಿರುತ್ತಾರೆ.