![ಗೃಹಲಕ್ಷ್ಮೀ ಯೋಜನೆ ನಿಲ್ಲಿಸಿದರೆ ಒಳ್ಳೆಯದು, ಮಹಿಳೆಯರು 2 ಸಾವಿರದಿಂದ ಬದುಕುವುದಲ್ಲ- BJP ನಾಯಕಿಯ ಹೇಳಿಕೆ ಗೃಹಲಕ್ಷ್ಮೀ ಯೋಜನೆ ನಿಲ್ಲಿಸಿದರೆ ಒಳ್ಳೆಯದು, ಮಹಿಳೆಯರು 2 ಸಾವಿರದಿಂದ ಬದುಕುವುದಲ್ಲ- BJP ನಾಯಕಿಯ ಹೇಳಿಕೆ](https://blogger.googleusercontent.com/img/b/R29vZ2xl/AVvXsEiCU12KRkJbwJtoGlz8gqko1oUva2yn1B2Vs6azOADlbZTP4xnaWCWDmO5yMk1uxDjH3km2IVmlMjxfWHSplfTs-J6Mg2rxxlqUWWCA3YCsF8DA2aKU2X6LHBU_stTdCTso4lDNGJ6CTRlIGg6IRdMrLG7f_SPu3Yem0GpHkZkvjNhaJ8Q9mAzonN5llVtE/s320/VideoCapture_20240401-185620.jpg)
ಗೃಹಲಕ್ಷ್ಮೀ ಯೋಜನೆ ನಿಲ್ಲಿಸಿದರೆ ಒಳ್ಳೆಯದು, ಮಹಿಳೆಯರು 2 ಸಾವಿರದಿಂದ ಬದುಕುವುದಲ್ಲ- BJP ನಾಯಕಿಯ ಹೇಳಿಕೆ
Monday, April 1, 2024
ಮಂಗಳೂರು: ಗೃಹಲಕ್ಷ್ಮೀ ಯೋಜನೆ ನಿಲ್ಲಿಸಿದರೆ ಒಳ್ಳೆಯದು ಎಂದು ದ.ಕ ಬಿಜೆಪಿ ನಾಯಕಿ ಸುಮನ ಶರಣ್ ಹೇಳಿದ್ದಾರೆ.
ಮಂಗಳೂರಿನ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಮಾತನಾಡಿದ ಅವರು ಗೃಹಲಕ್ಷ್ಮಿ ಯೋಜನೆ ನಿಲ್ಲಿಸಿದರೆ ಒಳ್ಳೆಯದು. ಮಹಿಳೆಯರು ಅಸಮರ್ಥರಲ್ಲ. ಅವರು 2 ಸಾವಿರದಿಂದ ಬದುಕುವುದಲ್ಲ ಎಂದು ಹೇಳಿದ್ದಾರೆ.
ಮಹಿಳೆಯರು ಪಡೆದುಕೊಂಡ ಹಣದ ನೆಗೆಟಿವ್ ತುಂಬಾ ಇದೆ. ಗೃಹಲಕ್ಷ್ಮೀ ತೆಗೆದುಕೊಂಡವರು ಕೂಡ ಈ ಬಾರಿ ಬಿಜೆಪಿಗೆ ಮತ ಹಾಕುತ್ತಾರೆ. ಖಜಾನೆ ಖಾಲಿಯಾಗಿದ್ದು, ಶಾಸಕರಿಗೆ ಅಭಿವೃದ್ದಿಗೆ ಹಣ ಬರುತ್ತಿಲ್ಲ. ನಾವು ಆಡಳಿತ ಮಾಡುವ ಮಂಗಳೂರು ಮಹಾನಗರ ಪಾಲಿಕೆಗೆ ಹಣ ಬರುತ್ತಿಲ್ಲ. ಈ ಬಿಟ್ಟಿ ಯೋಜನೆಯಿಂದ ಹೀಗೆ ಆಗಿದೆ ಎಂದು ಹೇಳಿದ್ದಾರೆ.