-->
ದೇವರಮನೆಗೆ ಪ್ರವಾಸಕ್ಕೆ ತೆರಳಿದ ಯುವಕರ ನಡುವೆ ಗಲಾಟೆ: ಕಾಡಿನ ನಡುವೆ ನಾಪತ್ತೆಯಾದ ಒಬ್ಬ ಮನೆಯಲ್ಲಿ ಪ್ರತ್ಯಕ್ಷ

ದೇವರಮನೆಗೆ ಪ್ರವಾಸಕ್ಕೆ ತೆರಳಿದ ಯುವಕರ ನಡುವೆ ಗಲಾಟೆ: ಕಾಡಿನ ನಡುವೆ ನಾಪತ್ತೆಯಾದ ಒಬ್ಬ ಮನೆಯಲ್ಲಿ ಪ್ರತ್ಯಕ್ಷ


ಬೆಳ್ತಂಗಡಿ: ಮೂಡಿಗೆರೆಯ ದೇವರಮನೆಗೆ ಪ್ರವಾಸಕ್ಕೆ ತೆರಳಿದ್ದ ಸ್ನೇಹಿತರ ನಡುವೆ ನಡೆದ ಜಗಳದಿಂದ ನಡೆದ ಒಂದು ನಾಪತ್ತೆ ಪ್ರಹಸನ ಈಗ ಸುಖಾಂತ್ಯಗೊಂಡಿದೆ. ಜಗಳದ ನಡುವೆ ಯುವಕನೊಬ್ಬ ಕಾಡಿನಲ್ಲಿ ನಾಪತ್ತೆಯಾಗಿದ್ದಾನೆ. ಆದರೆ ಎಷ್ಟು ಹುಡುಕಾಡಿದರೂ ಸಿಗದ ಯುವಕ ನೇರವಾಗಿ ಬೆಳ್ತಂಗಡಿಗೆ ಬಂದಿದ್ದು ಹುಡುಕಾಟ ನಡೆಸಿದ ಪೊಲೀಸರು, ಅರಣ್ಯ ಇಲಾಖೆಯವರಿಗೆ ಅಚ್ಚರಿ ಮೂಡಿಸಿದ್ದಾನೆ.

ಬೆಳ್ತಂಗಡಿ ತಾಲೂಕಿನ ಕೊಳ್ಳೂರು ನಿವಾಸಿ ದೀಕ್ಷಿತ್ (27) ನಾಪತ್ತೆಯಾದ ದೇವರ ಯುವಕ. ದೀಕ್ಷಿತ್ ತನ್ನ ಮನೆಯಿಂದ ದೇವರಮನೆಗೆ ಪ್ರವಾಸಕ್ಕೆ ತೆರಳಿದ್ದ. ಮಂಗಳವಾರ ಸಂಜೆ ಹಿಂತಿರುಗಿ ಬರುವ ವೇಳೆ ದಾರಿ ಮಧ್ಯೆ ಸ್ನೇಹಿತರ ನಡುವೆ ಯಾವುದೋ ಕಾರಣಕ್ಕೆ ಗಲಾಟೆ ನಡೆದಿತ್ತು. ಈ ವೇಳೆ ಗುಡ್ಡತೋಟ ಎಂಬಲ್ಲಿ ಕಾರು ನಿಲ್ಲಿಸಿ ಯುವಕರು ಜಗಳವಾಡಿದ್ದರು.

ಇದೇ ವೇಳೆ, ದೀಕ್ಷಿತ್ ಮುನಿಸಿಕೊಂಡು ಮರಳಿ ಕಾರು ಹತ್ತದೆ ಕಾಡಿನಲ್ಲಿ ಕಣ್ಮರೆಯಾಗಿದ್ದಾನೆ. ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು, ಇದು ಜೊತೆಗಿದ್ದವರು ಮತ್ತು ಸ್ಥಳೀಯರನ್ನು ದಿಗಿಲುಗೊಳಿಸಿದೆ. ದೀಕ್ಷಿತ್ ನಾಪತ್ತೆಯಾಗಿದ್ದರಿಂದ ಸ್ನೇಹಿತರು, ಸ್ಥಳೀಯರು, ಬಣಕಲ್ ಪೊಲೀಸರು ಅರಣ್ಯದೊಳಗಡೆ ಹುಡುಕಾಟ ನಡೆಸಿದ್ದರು. ಆದರೆ ಯುವಕ ನೇರವಾಗಿ ಬೇರೆ ವಾಹನದಲ್ಲಿ ಬೆಳ್ತಂಗಡಿಯ ತನ್ನ ಮನೆಗೆ ಮರಳಿದ್ದಾನೆ‌. ರಾತ್ರಿಯೇ ಮನೆ ಸೇರಿದ್ದ, ಈ ವಿಚಾರ ಬುಧವಾರ ಬೆಳಗ್ಗೆ ಸ್ನೇಹಿತರಿಗೆ ಗೊತ್ತಾಗಿದೆ. ಯುವಕ ಪತ್ತೆಯಾಗಿರುವ ಬಗ್ಗೆ ಬಣಕಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article