-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಕಟ್ಟಡದ ಮೇಲಿನಿಂದ ಬಿದ್ದ ರಾಡ್ ಶರೀರಕ್ಕೆ ಚುಚ್ಚಿದರೂ ಜಗತ್ತಿನ ಪರಿವೇ ಇಲ್ಲದೆ ಮೊಬೈಲ್ ನೋಡುತ್ತಾ ಕುಳಿತ ಕಾರ್ಮಿಕ

ಕಟ್ಟಡದ ಮೇಲಿನಿಂದ ಬಿದ್ದ ರಾಡ್ ಶರೀರಕ್ಕೆ ಚುಚ್ಚಿದರೂ ಜಗತ್ತಿನ ಪರಿವೇ ಇಲ್ಲದೆ ಮೊಬೈಲ್ ನೋಡುತ್ತಾ ಕುಳಿತ ಕಾರ್ಮಿಕ


ಥಾಣೆ: ಮೊಬೈಲ್ ನೋಡುತ್ತಾ ಕುಳಿತರೆ ಕೆಲವರಿಗೆ ಈ ಜಗತ್ತಿನ ಪರಿವೇ ಇರೋದಿಲ್ಲ. ಮೊಬೈಲ್ ಒಳಗಡೆ ಮುಳುಗಿ ಹೋಗುತ್ತಾರೆ. ಅಂತಹದ್ದೇ ಒಂದು ಆಘಾತಕಾರಿ ಘಟನೆಯೊಂದು ಬದ್ಲಾಪುರದಲ್ಲಿ ನಡೆದಿದೆ. ಇಲ್ಲಿನ ನಿರ್ಮಾಣ ಹಂತದ ಕಟ್ಟಡದ ಮೇಲಿನಿಂದ ಕಬ್ಬಿಣದ ರಾಡೊಂದು ಬಿದ್ದು ಕಾರ್ಮಿಕನ ಶರೀರದೊಳಗೆ ಹೊಕ್ಕಿತ್ತು. ಆತಂಕಕಾರಿ ವಿಚಾರವೆಂದರೆ, ಆತ ಈ ಸಂದರ್ಭ ಮೊಬೈಲ್ ನೋಡುತ್ತಾ ಕುಳಿತಿದ್ದರಿಂದ ರಾಡ್ ಬಿದ್ದಿರುವುದು ಆತನಿಗೆ ಗೊತ್ತೇ ಇರಲಿಲ್ಲ. ಆದರೆ ಅದೃಷ್ಟವಶಾತ್ ಇದೀಗ ಆತ ಅಪಾಯದಿಂದ ಪಾರಾಗಿದ್ದಾನೆ.

ಕಾರ್ಮಿಕರು ಇಲ್ಲಿನ ಕಟ್ಟಡವೊಂದರ ಶಾಪಿಂಗ್ ಮಾರ್ಟ್‌ನಲ್ಲಿ ಸಿಸಿಟಿವಿ ಅಳವಡಿಸುತ್ತಿದ್ದಾಗ ಶನಿವಾರ ಈ ಘಟನೆ ನಡೆದಿದೆ. ರಾಡ್ ಕೆಳಗೆ ಬೀಳುತ್ತಿರುವ ಸಂದರ್ಭದ ಫೋಟೋವನ್ನು ಕೆಲವರು ಮೊಬೈಲ್ ತಗೆದಿದ್ದು, ಈ ಫೋಟೊ ಎಲ್ಲೆಡೆ ವೈರಲ್ ಆಗುತ್ತಿದೆ.

ಬದ್ಲಾಪುರ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಅನಿಲ್ ಪಡ್ವಾಲ್ ಈ ಬಗ್ಗೆ ಪ್ರತಿಕ್ರಿಯಿಸಿ, "ಠಾಣೇಕರ್ ಪಲಾಸಿಯೋ ವಸತಿ ಕಾಮಗಾರಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕಾರ್ಮಿಕ ಸತ್ಯಪ್ರಕಾಶ್ ತಿವಾರಿ(26) ಶನಿವಾರ ಸಂಜೆ 4:30ರ ಸುಮಾರಿಗೆ ಮಾರ್ಟ್‌ನ ಹೊರಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸುತ್ತಿದ್ದರು. ಆದರೆ 8ನೇ ಮಹಡಿಯಿಂದ ಕಬ್ಬಿಣದ ರಾಡ್ ಬಿದ್ದು ಆತನನ್ನು ಚುಚ್ಚಿದಾಗ ತಿವಾರಿ ಅವರನ್ನು ತಕ್ಷಣ ದಾರಿಹೋಕರು ಚಿಕಿತ್ಸೆಗಾಗಿ ನಿರ್ಮಲ್ ಆಸ್ಪತ್ರೆಗೆ ಕರೆದೊಯ್ದರು. ತಿವಾರಿ ಅವರ ಸ್ಥಿತಿ ಈಗ ಸ್ಥಿರವಾಗಿದೆ ಎಂದು ಹೇಳಿದರು.

ಈ ಬಗ್ಗೆ ಇದುವರೆಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ, ಪ್ರಕರಣ ದಾಖಲಾದ ನಂತರ ಶೀಘ್ರ ಕ್ರಮ ಕೈಗೊಳ್ಳುತ್ತೇವೆ ಎಂದು ಪಡ್ವಾಲ್ ತಿಳಿಸಿದ್ದಾರೆ. 

Ads on article

Advertise in articles 1

advertising articles 2

Advertise under the article