-->
ಮಂಗಳೂರು: ಸರದಿಯಲ್ಲಿ ಅಡುಗೆ ಮಾಡುವ ವಿಚಾರದಲ್ಲಿ ಜಗಳ; ಓರ್ವನ ಕೊಲೆಯೊಂದಿಗೆ ಅಂತ್ಯ

ಮಂಗಳೂರು: ಸರದಿಯಲ್ಲಿ ಅಡುಗೆ ಮಾಡುವ ವಿಚಾರದಲ್ಲಿ ಜಗಳ; ಓರ್ವನ ಕೊಲೆಯೊಂದಿಗೆ ಅಂತ್ಯ


ಮಂಗಳೂರು: ಸರದಿಯಲ್ಲಿ ಅಡುಗೆ ಮಾಡುವ ವಿಚಾರದಲ್ಲಿ ನಡೆದ ಜಗಳವೊಂದು 
ಓಋವನ ಕೊಲೆಯೊಂದಿಗೆ ಅಂತ್ಯಗೊಂಡ ದುರಂತವೊಂದು ಮಂಗಳೂರು ನಗರದ ಸುರತ್ಕಲ್ ಠಾಣಾ ವ್ಯಾಪ್ತಿಯ ಕುಳಾಯಿ ಎಂಬಲ್ಲಿ ಸಂಭವಿಸಿದೆ.

ಬಿಹಾರ ರಾಜ್ಯದ ಸಮಸ್ತಿಪುರ್ರೆಬ್ರಾ ನಿವಾಸಿ ಚೋಟು ಕುಮಾರ್(21) ಮೃತಪಟ್ಟ ದುರ್ದೈವಿ.

ಮಾರ್ಬಲ್ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಉತ್ತರ ಭಾರತದ ಮೂಲದ ವಲಸೆ ಕಾರ್ಮಿಕರು ನಗರದ ಕುಳಾಯಿಲ್ಲಿ ವಾಸವಾಗಿದ್ದರು. ಆದರೆ ಫೆ.11ರಂದು ರಾತ್ರಿ ಇವರೊಳಗೆ ಸರದಿಯಲ್ಲಿ ಅಡುಗೆ ಮಾಡುವ ವಿಚಾರದಲ್ಲಿ  ಜಗಳ ನಡೆದಿದೆ‌. ಈ ವಿಚಾರ ಮಾತಿಗೆ ಮಾತು ಬೆಳೆದಯ ಮೂವರು ಪರಸ್ಪರ ಕೈಕೈ ಮಿಲಾಯಿಸಿಕೊಂಡು ಹೊಡೆದಾಡಿಕೊಂಡಿದ್ದಾರೆ. ಪರಿಣಾಮ ಗಾಯಗೊಂಡ ಮೂವರನ್ನು ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗಾಯಾಳುಗಳಲ್ಲಿ ಚೋಟು ಕುಮಾರ್ ಎಂಬಾತ ರವಿವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಉಳಿದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. 

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article