-->
1000938341
ಚಂದ್ರಬಾಬು ರೋಡ್ ಶೋ ವೇಳೆ ಒಳಚರಂಡಿಗೆ ಬಿದ್ದು 8ಮಂದಿ ಮೃತ್ಯು

ಚಂದ್ರಬಾಬು ರೋಡ್ ಶೋ ವೇಳೆ ಒಳಚರಂಡಿಗೆ ಬಿದ್ದು 8ಮಂದಿ ಮೃತ್ಯು

ನೆಲ್ಲೂರು: ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ರ್ಯಾಲಿ ನಡೆಯುತ್ತಿದ್ದ ಸಂದರ್ಭ ಒಳಚರಂಡಿ ಕಾಲುವೆಗೆ ಬಿದ್ದು ಓರ್ವ ಮಹಿಳೆ ಸೇರಿದಂತೆ 8 ಮಂದಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

ಮಾಜಿ ಸಿಎಂ ನಾಯ್ಡು ಚಂದ್ರಬಾಬು ಅವರ ಬೆಂಗಾವಲು ಪಡೆ ಸಂಜೆ ಈ ಪ್ರದೇಶವನ್ನು ಹಾದುಹೋಗುತ್ತಿದ್ದಂತೆ ಈ ಘಟನೆ ನಡೆದಿದೆ. ನಾಯ್ಡು ರೋಡ್ ಶೋ ವೀಕ್ಷಣೆಗೆ ಸಾವಿರಾರು ಮಂದಿ ಆಗಮಿಸಿದ್ದರು. ಈ ವೇಳೆ ನೂಕು ನುಗ್ಗಲು ನಡೆದಿದೆ. ಆಗ ಕೆಲವರು ಆಯ ತಪ್ಪಿ ಒಳಚರಂಡಿ ಕಾಲುವೆಗೆ ಬಿದ್ದು ಈ ದುರ್ಘಟನೆ ನಡೆದಿದೆ ಎಂದು ವರದಿಯಾಗಿದೆ.

ಒಳಚರಂಡಿ ಕಾಲುವೆಗೆ ಬಿದ್ದವರಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಬಳಿಕ ಸಭೆಯನ್ನು ರದ್ದುಪಡಿಸಿರುವ ಚಂದ್ರಬಾಬು ನಾಯ್ಡು ಅವರು, ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ.

Ads on article

Advertise in articles 1

advertising articles 2

Advertise under the article