-->

ಸೂರ್ಯಾಸ್ತದ ಸಮಯದಲ್ಲಿ ಮಾಡುವ ಈ ತಪ್ಪುಗಳಿಂದ ನಿಮ್ಮ ಮನೆಯ ಸಮೃದ್ಧಿ ಸರ್ವನಾಶವಾಗುತ್ತದೆ..!

ಸೂರ್ಯಾಸ್ತದ ಸಮಯದಲ್ಲಿ ಮಾಡುವ ಈ ತಪ್ಪುಗಳಿಂದ ನಿಮ್ಮ ಮನೆಯ ಸಮೃದ್ಧಿ ಸರ್ವನಾಶವಾಗುತ್ತದೆ..!


ಮುಸ್ಸಂಜೆಯಲ್ಲಿ ಕಸ ಗುಡಿಸುವುದು: ಸೂರ್ಯಾಸ್ತದ ಸಮಯದಲ್ಲಿ ಮತ್ತು ಅದರ ನಂತರ ಕಸ ಗುಡಿಸುವುದನ್ನು ತಪ್ಪಿಸಬೇಕು. ಹೀಗೆ ಮಾಡುವುದರಿಂದ ನಕಾರಾತ್ಮಕ ಶಕ್ತಿ ಉಂಟಾಗುತ್ತದೆ. 

ಸಂಜೆ ನಿದ್ರಿಸುವುದು: ಸಂಜೆ ಮಲಗುವುದನ್ನು ತುಂಬಾ ಕೆಟ್ಟದ್ದು ಎಂದು ಪರಿಗಣಿಸಲಾಗುತ್ತದೆ. ಸೂರ್ಯಾಸ್ತದ ಸಮಯದಲ್ಲಿ ಮಲಗುವುದು ಅನೇಕ ವಿಧಗಳಲ್ಲಿ ಹಾನಿಯನ್ನುಂಟುಮಾಡುತ್ತದೆ. ಈ ಸಮಯವು ಸಂಪತ್ತಿನ ಅಧಿದೇವತೆಯಾದ ತಾಯಿ ಮಹಾಲಕ್ಷ್ಮಿ ಮನೆ ಪ್ರವೇಶಿಸುವ ಸಮಯವಾದ್ದರಿಂದ ಸಂಜೆ ಹೊತ್ತಲ್ಲಿ ಮಾಡುವ ಈ ತಪ್ಪಿನಿಂದ ತಾಯಿ ಕೋಪಗೊಳ್ಳುತ್ತಾರೆ. 

ತುಳಸಿಯನ್ನು ಸ್ಪರ್ಶಿಸುವುದು:  ಸೂರ್ಯಾಸ್ತದ ನಂತರ ತುಳಸಿ ಗಿಡವನ್ನು ಮುಟ್ಟುವುದು ತುಂಬಾ ಅಶುಭ. ಹಾಗೆಯೇ, ಸೂರ್ಯಾಸ್ತದ ನಂತರ ತುಳಸಿ ಎಲೆಗಳನ್ನು ಕೀಳಬಾರದು. ಈ ರೀತಿ ಮಾಡುವುದರಿಂದ ತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ.   


ಹೊಸ್ತಿಲ ಮೇಲೆ ಕುಳಿತುಕೊಳ್ಳುವುದು: ಸಂಜೆಯ ವೇಳೆಯಲ್ಲಿ ಯಾರೂ ಹೊಸ್ತಿಲಲ್ಲಿ ಕುಳಿತುಕೊಳ್ಳಬಾರದು. ಹಾಗೆ ಮಾಡುವುದು ತುಂಬಾ ಅಶುಭ. ಸಂಜೆಯ ವೇಳೆ ಹೊಸ್ತಿಲಲ್ಲಿ ಜನರು ಕುಳಿತಿರುವ ಮನೆಗೆ ತಾಯಿ ಲಕ್ಷ್ಮಿ ಪ್ರವೇಶಿಸುವುದಿಲ್ಲ ಎನ್ನಲಾಗುವುದು.


ಸಂಜೆ ಬಿಳಿ ವಸ್ತುಗಳ ದಾನ
ಸಂಜೆ ಬಿಳಿ ವಸ್ತುಗಳ ದಾನ: ಸೂರ್ಯಾಸ್ತದ ಸಮಯದಲ್ಲಿ ಮತ್ತು ನಂತರ ಮೊಸರು, ಹಾಲು, ಉಪ್ಪು ದಾನ ಮಾಡಬಾರದು. ಈ ವಸ್ತುಗಳು ತಾಯಿ ಲಕ್ಷ್ಮಿಗೆ ಸಂಬಂಧಿಸಿವೆ ಮತ್ತು ಸಂಜೆ ಈ ವಸ್ತುಗಳನ್ನು ದಾನ ಮಾಡುವುದರಿಂದ ಲಕ್ಷ್ಮಿ ಮನೆಯಿಂದ ಹೊರಹೋಗುತ್ತಾಳೆ. 


Ads on article

Advertise in articles 1

advertising articles 2

Advertise under the article