-->
1000938341
ಮಂಗಳೂರು: ವಾಕಿಂಗ್ ನಿರತ ವ್ಯಕ್ತಿ ಲಾರಿ‌ ಅಪಘಾತದಿಂದ ಸಾವು

ಮಂಗಳೂರು: ವಾಕಿಂಗ್ ನಿರತ ವ್ಯಕ್ತಿ ಲಾರಿ‌ ಅಪಘಾತದಿಂದ ಸಾವು

ಮಂಗಳೂರು: ವಾಕಿಂಗ್ ನಿರತರಾಗಿದ್ದ ವ್ಯಕ್ತಿಯೋರ್ವರು ಲಾರಿ ಅಪಘಾತಕ್ಕೊಳಗಾಗಿ ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆಯೊಂದು ನಗರದ ಕೊಟ್ಟಾರ ಚೌಕಿಯಲ್ಲಿ ಬುಧವಾರ ಮುಂಜಾನೆ ನಡೆದಿದೆ. 

ಅಶೋಕನಗರದ ನಿವಾಸಿ 40-45 ವರ್ಷ ಪ್ರಾಯದ ವ್ಯಕ್ತಿ ಮೃತಪಟ್ಟ ದುರ್ದೈವಿ.

ಪಾದಚಾರಿ ವ್ಯಕ್ತಿ ತಮ್ಮ ಆ್ಯಕ್ಟಿವಾ ವಾಹನವನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ವಾಕಿಂಗ್ ನಲ್ಲಿ ನಿರತರಾಗಿದ್ದರು. ಈ ವೇಳೆ ಹರ್ಯಾಣ ನೋಂದಣಿಯ ಲಾರಿಯೊಂದು ಅವರಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಪರಿಣಾಮ ಆ ವ್ಯಕ್ತಿ ಗಂಭೀರ ಗಾಯಗೊಂಡಿದ್ದು, ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲಾಗಲೇ ಆ ವ್ಯಕ್ತಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. 

ಈ ಬಗ್ಗೆ ಸಂಚಾರ ಉತ್ತರ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article