-->

ಕೀಟನಾಶಕ ಸಿಂಪಡಿಸುತ್ತಿದ್ದಾಗ ವಿದ್ಯುತ್ ಸ್ಪರ್ಶಗೊಂಡು ಮೂವರು ರೈತರು ಸ್ಥಳದಲ್ಲಿಯೇ ದುರ್ಮರಣ

ಕೀಟನಾಶಕ ಸಿಂಪಡಿಸುತ್ತಿದ್ದಾಗ ವಿದ್ಯುತ್ ಸ್ಪರ್ಶಗೊಂಡು ಮೂವರು ರೈತರು ಸ್ಥಳದಲ್ಲಿಯೇ ದುರ್ಮರಣ

ತಿರುಪತಿ: ಹೊಲದಲ್ಲಿ ಕೀಟನಾಶಕ ಸಿಂಪಡಿಸುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶದಿಂದ ಮೂವರು ರೈತರು ಸ್ಥಳದಲ್ಲಿಯೇ ದುರ್ಮರಣಕ್ಕೀಡಾದ ಘಟನೆ ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ಚಾಪಡು ಮಂಡಲ ಚಿಯ್ಯಪಡು ಎಂಬಲ್ಲಿ ಶುಕ್ರವಾರ ನಡೆದಿದೆ.

ಪೆದ್ದಿರೆಡ್ಡಿ ಓಬಳ ರೆಡ್ಡಿ(65) , ಪೆದ್ದಿರೆಡ್ಡಿ ಬಾಲ ಓಬಳ ರೆಡ್ಡಿ (60) ಮತ್ತು ಬಿ.ಮಲ್ಲಿಕಾರ್ಜುನ ರೆಡ್ಡಿ (23) ಮೃತಪಟ್ಟ ದುರ್ದೈವಿಗಳು. 

ತಿರುಪತಿ ಗ್ರಾಮಕ್ಕೆ ಸಮೀಪದಲ್ಲಿರುವ ತಮ್ಮ ಹೊಲದಲ್ಲಿ ಈ ರೈತರು ಕೀಟನಾಶಕವನ್ನು ಸಿಂಪಡಿಸುತ್ತಿದ್ದ ವೇಳೆ, ಒಬ್ಬ ರೈತನಿಗೆ ಅತ್ಯಂತ ಕೆಳಮಟ್ಟದಲ್ಲಿ ನೇತಾಡುತ್ತಿದ್ದ ವಿದ್ಯುತ್ ಕೇಬಲ್ ತಗುಲಿದೆ. ಇದನ್ನು ಕಂಡ ಮತ್ತಿಬ್ಬರು ಕೂಡಾ ಆತನಿಗೆ ನೆರವು ನೀಡಲು ಮುಂದಾಗಿದ್ದಾರೆ. ಆಗ ಅವರಿಗೂ ವಿದ್ಯುತ್ ಸ್ಪರ್ಶವಾಗಿ ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ . 

ಇದನ್ನು ಗಮನಿಸಿದ ಸ್ಥಳೀಯ ರೈತರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಆಸ್ಪತ್ರೆಗೆ ರೈತರನ್ನು ಚಿಕಿತ್ಸೆಗಾಗಿ ರವಾನಿಸಿದ್ದಾರೆ. ಆದರೆ ವೈದ್ಯರು ಈ ಮೂವರು ರೈತರೂ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.

Ads on article

Advertise in articles 1

advertising articles 2

Advertise under the article