-->

ಮಂಗಳೂರು: ಬೆಂಗಳೂರಿನಿಂದ ದಿಢೀರ್ ಕಾಣೆಯಾದ 14ರ ಬಾಲಕಿ ಮಂಗಳೂರಿನಲ್ಲಿ ಸುತ್ತಾಟ; ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯ ಸೆರೆ

ಮಂಗಳೂರು: ಬೆಂಗಳೂರಿನಿಂದ ದಿಢೀರ್ ಕಾಣೆಯಾದ 14ರ ಬಾಲಕಿ ಮಂಗಳೂರಿನಲ್ಲಿ ಸುತ್ತಾಟ; ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯ ಸೆರೆ

ಮಂಗಳೂರು: ಬೆಂಗಳೂರು ನಗರದಿಂದ ದಿಢೀರ್ ಕಾಣೆಯಾಗಿರುವ 14ವರ್ಷದ ಭಾರ್ಗವಿ ಎಂಬ ಬಾಲಕಿ ಮಂಗಳೂರು ನಗರದಲ್ಲಿ ಕಾಣಿಸಿಕೊಂಡಿದ್ದಾಳೆ. ಆಕೆ ನಗರದಲ್ಲಿ ನಾನಾ ಕಡೆ ಸುತ್ತಾಟ ನಡೆಸಿರುವ ಸಿಸಿ ಕ್ಯಾಮರಾದ ದೃಶ್ಯದಲ್ಲಿ ಸೆರೆಯಾಗಿದೆ. ಆದರೆ ಆ ಬಳಿಕ ಆಕೆ  ಕಣ್ಮರೆಯಾಗಿದ್ದು, ಮತ್ತೆ ಎಲ್ಲಿಗೆ ಹೋಗಿದ್ದಾಳೆಂದು ಇನ್ನೂ ತಿಳಿದು ಬಂದಿಲ್ಲ.


ಬಾಲಕಿ ಭಾರ್ಗವಿಯು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನ ಮನೆಯಿಂದ ಸೋಮವಾರ ದಿಢೀರ್‌ ಎಂದು ನಾಪತ್ತೆಯಾಗಿದ್ದಾಳೆ. ಆಕೆ ಅಲ್ಲಿಂದ ಬಸ್ ಮೂಲಕ ಮಂಗಳೂರು ಕಡೆಗೆ ಬಂದಿದ್ದಾಳೆ. ಅಂದು ನಸುಕಿನ ವೇಳೆ 3 ಗಂಟೆ ಸುಮಾರಿಗೆ ಆಕೆ ಮಂಗಳೂರಿನ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಬಂದಿಳಿದಿದ್ದಾಳೆ. ಆಕೆ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿರುವುದು ಅಲ್ಲಿನ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.




ಬಸ್ ನಿಲ್ದಾಣದಿಂದ ಬಾಲಕಿ ಭಾರ್ಗವಿ ಆಟೊ ರಿಕ್ಷಾವೊಂದನ್ನು ಬಾಡಿಗೆಗೆ ಗೊತ್ತುಮಾಡಿ ಮುಕ್ಕ ಬೀಚ್‌ಗೆ ತೆರಳಿದ್ದಾಳೆ. ಅಲ್ಲಿ ಕೊಂಚ ಕಾಲ ತಿರುಗಾಡಿ, ಅದೇ ರಿಕ್ಷಾದಲ್ಲಿಯೇ ಕದ್ರಿ ಪಾರ್ಕ್‌ಗೆ ಆಗಮಿಸಿದ್ದಾಳೆ. ಪಾರ್ಕ್ ಬಳಿಯ ಬಾಲಭವನ ಸಮೀಪದ ಶೌಚಾಲಯಕ್ಕೆ ಹೋಗಿ ಮುಖ ತೊಳೆದಿದ್ದಾಳೆ. ಅಲ್ಲಿಂದ ವಾಪಸ್ ಅದೇ ರಿಕ್ಷಾದಲ್ಲಿ ಮತ್ತೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ತೆರಳಿದ್ದಾಳೆ. ಆಟೋ ಚಾಲಕನಲ್ಲಿ ತಾನು ಚಿಕ್ಕಮ್ಮನ ಮನೆಗೆ ಹೋಗುವುದಾಗಿ ಹೇಳಿ ತೆರಳಿದ್ದಾಳೆ ಎಂದು ರಿಕ್ಷಾ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. 

ಆ ಬಳಿಕ ಬಾಲಕಿ ಯಾವ ಕಡೆ ಹೋಗಿದ್ದಾಳೆಂದು ಮಾಹಿತಿ ಲಭ್ಯವಿಲ್ಲ. ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದ ಕಾರಣ ಬಾಲಕಿ ಮನೆ ಬಿಟ್ಟಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಬಾಲಕಿಯ ಬಗ್ಗೆ ಮಾಹಿತಿ ದೊರೆತಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಪೊಲೀಸರು ತಿಳಿಸಿದ್ದಾರೆ. ಬಾಲಕಿ ವಿವಿಧೆಡೆ ಸಂಚರಿಸಿದ ರಿಕ್ಷಾ ಚಾಲಕನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿ, ಮಾಹಿತಿ ಪಡೆದುಕೊಳ್ಳಲಾಗಿದೆ.

Ads on article

Advertise in articles 1

advertising articles 2

Advertise under the article