ಬಾಲಕನಿಗೆ ದೈಹಿಕ ಕಿರುಕುಳ: ಮದ್ರಸಾ ಉಸ್ತಾದ್ ಅರೆಸ್ಟ್

ಬಾಲಕನಿಗೆ ದೈಹಿಕ ಕಿರುಕುಳ: ಮದ್ರಸಾ ಉಸ್ತಾದ್ ಅರೆಸ್ಟ್





ಮದರಸಾದಲ್ಲಿ 11ರ ಹರೆಯದ ಬಾಲಕನಿಗೆ ದೈಹಿಕ ಹಲ್ಲೆ ಮತ್ತು ಕಿರುಕುಳ ನೀಡಿದ ಉಸ್ತಾನ್‌ನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.



ಹರೇಕಳ ಗ್ರಾಮದ  ದೇರಿಕಟ್ಟೆ ಎಂಬಲ್ಲಿ ಮದರಸದ ಶಿಕ್ಷಕ ಹಲ್ಲೆ ನಡೆಸಿರುವ ಘಟನೆ ನಡೆದಿತ್ತು. ನೊಂದ ಬಾಲಕನ ತಂದೆ ಮೊಹಮ್ಮದ್ ಎಂಬವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಆರೋಪಿಯನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.



ಬಾಲಕನಿಗೆ ಹಲ್ಲೆ ನಡೆದಿರುವ ಘಟನೆ ಶನಿವಾರ ಸಂಜೆ ವೇಳೆ ಸಂಭವಿಸಿದೆ. ದೂರಿನ ಹಿನ್ನೆಲೆಯಲ್ಲಿ ಶಿಕ್ಷಕ ಉಸ್ತದ್ ಯಹ್ಯಾ ಫೈಝಿಯನ್ನು ಬಂಧಿಸಲಾಗಿದೆ.



ಹರೇಕಳ ದೇರಿಕಟ್ಟೆ ಮಹಮ್ಮದ್ ಎಂಬವರ ಪುತ್ರ 11 ವರ್ಷದ ಬಾಲಕ ಹಫೀಲ್ ಅಹಮ್ಮದ್ ದೇಹದ ಮೇಲೆ ಬಾಸುಂಡೆ ಬರುವಂತೆ ಶಿಕ್ಷಕ ಹೊಡೆದಿದ್ದ.



ಮದರಸಕ್ಕೆ ತೆರಳಿದ್ದ ಬಾಲಕನಿಗೆ ಕ್ಷುಲ್ಲಕ ವಿಚಾರವೊಂದಕ್ಕೆ ಸಂಬಂಧಿಸಿದಂತೆ ಶಿಕ್ಷಕ ಉಸ್ತದ್ ಯಹ್ಯಾ ಫೈಝಿ ಎಂಬಾತ ಹಲ್ಲೆ ನಡೆಸಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 

BREAKING NEWS
Loading latest news...
Join our WhatsApp Channel Powered By : Online Pudu