-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
BIGBOSS OTT- ಬಾತ್ರೂಮ್ ನಲ್ಲಿ ಸೋನು ಗೌಡನ ಹುಚ್ಚಾಟ..!! ತಲೆ ತಿರುಗಿ ಬಿದ್ದ ಗುರೂಜಿ!?

BIGBOSS OTT- ಬಾತ್ರೂಮ್ ನಲ್ಲಿ ಸೋನು ಗೌಡನ ಹುಚ್ಚಾಟ..!! ತಲೆ ತಿರುಗಿ ಬಿದ್ದ ಗುರೂಜಿ!?


ಆರ್ಯವರ್ಧನ್​ ಗುರೂಜಿ ಅವರಿಗೆ ದೆವ್ವ ಎಂದರೆ ಭಯ. ಆ ಬಗ್ಗೆ ಅವರು ಅನೇಕ ಬಾರಿ ಹೇಳಿಕೊಂಡಿದ್ದುಂಟು. ಆ ಭಯವನ್ನೇ ಟಾರ್ಗೆಟ್​ ಮಾಡಿಕೊಂಡು ಬಿಗ್​ ಬಾಸ್​ ಮನೆಯಲ್ಲಿ ಅವರನ್ನು ಹೆದರಿಸುವ ಪ್ರಯತ್ನ ಮಾಡಲಾಗಿದೆ. ಸೋನು ಶ್ರೀನಿವಾಸ್​ ಗೌಡ ಅವರು ದೆವ್ವದ ರೀತಿಯಲ್ಲಿ ಮೇಕಪ್​ ಮಾಡಿಕೊಂಡು ಹೆದರಿಸಿದ್ದಾರೆ. 


ಆರ್ಯವರ್ಧನ್​ ಅವರು ಬಾತ್​ ರೂಮ್​ನಲ್ಲಿ ಇದ್ದರು. ಈ ವೇಳೆ ಸೋನು ಗೌಡ ಅವರು ತಮ್ಮ ಮುಖಕ್ಕೆ ಪೌಡರ್​ ಬಳಿದುಕೊಂಡು, ಹಣೆಗೆ ದೊಡ್ಡದಾಗಿ ಕುಂಕುಮ ಹಚ್ಚಿಕೊಂಡು, ಕೂದಲು ಕೆದರಿಕೊಂಡು ಬಾತ್​ ರೂಮ್​ ಹೊರಗೆ ನಿಂತಿದ್ದರು. ಬಾತ್​ ರೂಮ್​ ಬಾಗಿಲು ತೆಗೆಯುತ್ತಿದ್ದಂತೆಯೇ ಸೋನು ಗೌಡ ಮುಖ ನೋಡಿ ಗುರೂಜಿ ನಿಜವಾಗಿಯೂ ಬೆಚ್ಚಿ ಬಿದ್ದರು. ಕೆಳಗಿ ಬಿದ್ದು ಪ್ರಜ್ಞೆ ತಪ್ಪಿದ ಅವರನ್ನು ರೂಪೇಶ್​ ಮತ್ತು ರಾಕೇಶ್​ ಸೇರಿ ಎತ್ತಿಕೊಂಡು ಬಂದರು. ಇಡೀ ಮನೆಯಲ್ಲಿ ಆತಂಕದ ವಾತಾವರಣ ನಿರ್ಮಾಣ ಆಯಿತು.

ಆರ್ಯವರ್ಧನ್​ ಅವರಿಗೆ ಹಾರ್ಟ್​ ಅಟ್ಯಾಕ್​ ಆಗಿರಬಹುದು ಎಂದು ಎಲ್ಲರೂ ಭಯಪಟ್ಟರು. ‘ನಾನೆಲ್ಲೋ ಇದು ಜೋಕ್​ ಅಂದುಕೊಂಡೆ. ದೇವರಾಣೆ ಜೋಕ್​ ಅಲ್ಲ’ ಎಂದು ರೂಪೇಶ್​ ಆತಂಕ ಹೊರಹಾಕಿದರು. ನಂತರ ಗುರೂಜಿಯನ್ನು ಸಮಾಧಾನ ಮಾಡುವ ಕೆಲಸ ಎಲ್ಲರಿಂದ ಆಯಿತು. ‘ನಿಜಕ್ಕೂ ದೆವ್ವ ಅಂತ ಹೆದರಿಕೊಂಡೆ’ ಎಂದು ಗುರೂಜಿ ಕಣ್ಣೀರು ಹಾಕಿದ್ದಾರೆ. ಬಾತ್​ ರೂಮ್​ನಲ್ಲಿ ಅವರು ಬಿದ್ದಿದ್ದ ರೀತಿಯನ್ನು ನೆನಪಿಸಿಕೊಂಡು ಅಕ್ಷತಾ ಕುಕ್ಕಿ ಅತ್ತರು.

ಈ ಎಲ್ಲ ವಿಚಾರ ‘ಸೂಪರ್​ ಸಂಡೇ ವಿತ್​ ಸುದೀಪ್​’ ಎಪಿಸೋಡ್​ನಲ್ಲಿ ಚರ್ಚೆಗೆ ಬಂದಿದೆ. ಆರ್ಯವರ್ಧನ್​ ಗುರೂಜಿಗೆ ಕಿಚ್ಚ ಸುದೀಪ್​ ಸಮಾಧಾನ ಮಾಡಿದ್ದಾರೆ. ‘ಬಾತ್​ ರೂಮ್​ನಲ್ಲಿ ದೆವ್ವ ಇಲ್ಲ. ನಿಮ್ಮ ಸುತ್ತ-ಮುತ್ತ 300 ತಂತ್ರಜ್ಞರು ಇದ್ದಾರೆ. ನಿಮಗೆ ತೊಂದರೆ ಆದ್ರೆ ತಕ್ಷಣ ಸಹಾಯಕ್ಕೆ ಬರುತ್ತಾರೆ’ ಎಂದು ಸುದೀಪ್​ ಅಭಯ ನೀಡಿದ್ದಾರೆ.

Ads on article

Advertise in articles 1

advertising articles 2

Advertise under the article

ಸುರ