-->

"ನನ್ನ ಮನಸ್ಸಿನ ಮಾತು ಕೇಳಲು ತೀರ್ಮಾನಿಸಿದ್ದೇನೆ"- 2ನೇ ಮದುವೆ ಬಗ್ಗೆ ಮೌನ ಮುರಿದ ನಟಿ ಮೇಘನಾ ರಾಜ್!!

"ನನ್ನ ಮನಸ್ಸಿನ ಮಾತು ಕೇಳಲು ತೀರ್ಮಾನಿಸಿದ್ದೇನೆ"- 2ನೇ ಮದುವೆ ಬಗ್ಗೆ ಮೌನ ಮುರಿದ ನಟಿ ಮೇಘನಾ ರಾಜ್!!


ನಟಿ ಮೇಘನಾ ರಾಜ್ ಸರ್ಜಾ ಎರಡನೇ ಮದುವೆ ಬಗ್ಗೆ ನೀಡಿದ್ದಾರೆ.ಚಿರು ಸರ್ಜಾ ತೀವ್ರ ಹೃದಯಾಘಾತದಿಂದ ನಿಧನರಾದರು. ಈ ವೇಳೆ ನಟಿ ಮೇಘನಾ ರಾಜ್ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರು.ಇದೇ ನೋವಿನಲ್ಲೇ ಮಗನನ್ನು ಹೆತ್ತು ಸಿಂಗಲ್ ಪೇರೇಂಟ್ ರೀತಿಯಲ್ಲಿ ಬೆಳೆಸುತ್ತ ಬರುತ್ತಿದ್ದಾರೆ. 


ಇದೀಗ ಮೇಘನಾ ಸರ್ಜಾ ಎರಡನೇ ಮದುವೆಯಾಗಲಿದ್ದಾರೆ ಎಂಬ ಸಂಗತಿ ಎಲ್ಲೆಡೆ ಹರಿದಾಡಲಾರಂಭಿಸಿದೆ. ಇತ್ತೀಚಿಗೆ ಮಾಧ್ಯಮದ ಜೊತೆಗೆ ಮಾತನಾಡಿದ ಮೇಘನಾ ರಾಜ್, ನನ್ನ ಸುತ್ತಲೂ ಇರುವ ಹಲವರು ನನಗೆ ಎರಡನೇ ಮದುವೆಯಾಗಲು ಸಲಹೆ ನೀಡುತ್ತಿದ್ದಾರೆ. ಆದರೆ ಒಂಟಿಯಾಗಿರಲು ಮತ್ತು ಒಂಟಿಯಾಗಿಯೇ ಮಗನನ್ನು ಬೆಳೆಸಲು ಸಲಹೆ ನೀಡುವ ತಂಡವೂ ಇದೆ ಎಂದು ಮೇಘನಾ ಹೇಳಿದ್ದಾರೆ.
 
ನಮ್ಮ ಸಮಾಜವೇ ಹೀಗೆ. ಕೆಲವರು ನೀನು ಇನ್ನೊಂದು ಮದುವೆಯಾಗಬೇಕು ಅಂತಾರೆ. ಮತ್ತೆ ಕೆಲವರು ರಾಯನ್ ನ ನೋಡಿಕೊಂಡು ಒಂಟಿಯಾಗಿ ಖುಷಿಯಾಗಿರಬೇಕು ಎನ್ನುತ್ತಾರೆ. ಹೀಗಾಗಿ ನಾನು ಯಾರ ಮಾತನ್ನು ಕೇಳಲಿ? ಹೀಗಾಗಿ ನಾನು ನನ್ನ ಮನಸ್ಸಿನ ಮಾತು ಕೇಳಲು ತೀರ್ಮಾನಿಸಿದ್ದೇನೆ’ ಎಂದಿದ್ದಾರೆ.

Ads on article

Advertise in articles 1

advertising articles 2

Advertise under the article