-->

ಬ್ಯಾಂಕ್ ಮ್ಯಾನೇಜರ್ ನಿಂದ 1.50 ಕೋಟಿ ರೂ. ವಂಚನೆ : ಆರೋಪಿ ಪರಾರಿ

ಬ್ಯಾಂಕ್ ಮ್ಯಾನೇಜರ್ ನಿಂದ 1.50 ಕೋಟಿ ರೂ. ವಂಚನೆ : ಆರೋಪಿ ಪರಾರಿ

ಉತ್ತರಕನ್ನಡ: ರಾಷ್ಟ್ರೀಕೃತ ಬ್ಯಾಂಕ್​ವೊಂದರ ಮ್ಯಾನೇಜರ್​ 1.50 ಕೋಟಿ ರೂ. ದುರ್ಬಳಕೆ ಮಾಡಿ ತಲೆಮರೆಸಿಕೊಂಡಿರುವ ಪ್ರಕರಣವೊಂದು‌ ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ವರದಿಯಾಗಿದೆ. 

ಇದೀಗ ಬ್ಯಾಂಕ್ ಮ್ಯಾನೇಜರ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಭಟ್ಕಳದ ಬಜಾರ್​ನಲ್ಲಿ ಕಾರ್ಯಾಚರಿಸುವ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದ ಶಾಖೆಯ ಮ್ಯಾನೇಜರ್ ಅನೂಪ್​ ಪೈ ಎಂಬಾತ ಆರೋಪಿ. ಮೂಲತಃ ಮಂಗಳೂರಿನ ಬೋಲ್ಪುಗುಡ್ಡೆ ಕಾವೂರು ನಿವಾಸಿಯಾಗಿರುವ ಅನೂಪ್​ ಪೈ, ಬ್ಯಾಂಕ್​ನ ಸಿಸ್ಟಮ್ ಸಸ್ಪೆನ್ಸ್ ಖಾತೆಗೆ ಖರ್ಚು ಹಾಕಿ ಹಣ ದುರ್ಬಳಕೆ ಮಾಡಿಕೊಂಡಿರುವ ಆರೋಪ ಎದುರಿಸುತ್ತಿದ್ದಾರೆ.

ಇದೀಗ ಆತ ತಲೆ ಮರೆಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

Ads on article

Advertise in articles 1

advertising articles 2

Advertise under the article