-->

ಎಟಿಎಂ ಕಾರ್ಡ್ ಅವಧಿ ಮುಗಿದಿದೆ ಎಂದು ಮಹಿಳೆಯ  ಖಾತೆಯಿಂದ 74 ಸಾವಿರ ರೂ. ಎಗರಿಸಿದ ಸೈಬರ್ ಖದೀಮ

ಎಟಿಎಂ ಕಾರ್ಡ್ ಅವಧಿ ಮುಗಿದಿದೆ ಎಂದು ಮಹಿಳೆಯ ಖಾತೆಯಿಂದ 74 ಸಾವಿರ ರೂ. ಎಗರಿಸಿದ ಸೈಬರ್ ಖದೀಮ


ಚಿತ್ತೂರು: ಇತ್ತೀಚಿನ ದಿನಗಳಲ್ಲಿ ಸೈಬರ್​ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದೆ. ಜನರನ್ನು ವಂಚನೆ ಮಾಡಿ ಸರ್ಕಾರಿ ಯೋಜನೆಗಳ ಹೆಸರಲ್ಲಿ ಕೆವೈಸಿ, ಬ್ಯಾಂಕ್​ ಖಾತೆ ಮತ್ತು ಎಟಿಎಂ ವಿವರಗಳನ್ನು ಪಡೆಯುವ ಅವರ ಬ್ಯಾಂಕ್​ ಖಾತೆಯಲ್ಲಿರುವ ದುಡ್ಡನ್ನು ಸೈಬರ್​ ಖದೀಮರು ಎಗರಿಸುತ್ತಿರುವ ಸಾಕಷ್ಟು ಪ್ರಕರಣಗಳು ದಾಖಲಾಗುತ್ತಿವೆ. ಸೈಬರ್​ ಖದೀಮರ ಮಾತಿಗೆ ಮರುಳಾಗುವ ಜನರು ಸ್ವಲ್ಪವೂ ಯೋಚನೆ ಮಾಡದೆ ಅವರು ಕೇಳುವ ವಿವರಗಳನ್ನೆಲ್ಲಾ ನೀಡಿ ಮೋಸ ಹೋಗುತ್ತಿದ್ದಾರೆ. 

ಇದೇ ರೀತಿಯ ಪ್ರಕರಣವೊಂದು ಇತ್ತೀಚೆಗೆ ಆಂಧ್ರದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ. ಈ ಬಗ್ಗೆ ಸೈಬರ್​ ಠಾಣೆಯಲ್ಲಿ ದೂರು ದಾಖಲಾಗಿದೆ. ಪೆದ್ದಪಂಜನಿ ವಲಯದ ನಾಗಿರೆಡ್ಡಿಪಲ್ಲಿ ಪಂಚಾಯತ್ ಚಲವರಿಪಲ್ಲಿ ಗ್ರಾಮದ ನಿವಾಸಿ ಮಂಜುಳಾ ವಂಚನೆಗೊಳಗಾದವರು‌. ಈಕೆ ರಾಯಲಪೇಟೆಯ ಇಂಡಿಯನ್​ ಬ್ಯಾಂಕ್​ನಲ್ಲಿ ಸೇವಿಂಗ್ಸ್​ ಖಾತೆಯನ್ನು ಹೊಂದಿದ್ದಾರೆ. 

ಸಂತ್ರಸ್ತೆಯ ಬ್ಯಾಂಕ್​ ಖಾತೆಗೆ ಲಿಂಕ್​ ಆಗಿರುವ ಪತಿಯ ಮೊಬೈಲ್ ಸಂಖ್ಯೆ​ಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿದ್ದಾನೆ. ನಾನು ಬ್ಯಾಂಕ್​ ಮ್ಯಾನೇಜರ್​ ಮಾತನಾಡುತ್ತಿದ್ದೇನೆ ಎಂದು ಪರಿಚಯಿಸಿದ್ದಾನೆ. ಆತ ನಿಮ್ಮ ಎಟಿಎಂ ಕಾರ್ಡ್​ ನ ಅವಧಿ ಮುಗಿದಿದೆ ಎಂದು ಹೇಳಿ, ಆಧಾರ್​ ನಂಬರ್​ ಮತ್ತು ಅಕೌಂಟ್​ ನಂಬರ್​ ಅಪ್ಡೇಟ್​ ಮಾಡಬೇಕಿದೆ ಎಂದು ಕೇಳಿದ್ದಾನೆ. ತಕ್ಷಣ ಹಿಂದೆ ಮುಂದೆ ಯೋಚನೆ ಮಾಡದೆ ಅಪರಿಚಿತ ಕೇಳಿರುವ ಎಲ್ಲಾ ವಿವರಗಳನ್ನು ಮಹಿಳೆ ನೀಡಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಮತ್ತೆ ಕರೆ ಮಾಡಿ ಒಟಿಪಿ ನಂಬರ್​ ಹೇಳುವಂತೆ ಕೇಳಿದ್ದಾನೆ. ಅದನ್ನು ಸಂತ್ರಸ್ತೆ ಹೇಳಿದ್ದಾಳೆ. 

ಇದಾದ ಕೆಲವೇ ಕ್ಷಣಗಳಲ್ಲಿ ಆಕೆಯ ಬ್ಯಾಂಕ್​ ಖಾತೆಯಿಂದ ಸೈಬರ್​ ಖದೀಮ 74,571 ರೂ. ಹಣ ಎಗರಿಸಿದ್ದಾನೆ. ತಕ್ಷಣ ವಂಚನೆಗೊಳಗಾದ ಮಹಿಳೆಯ ಮೊಬೈಲ್ ಗೆ ಹಣ ಕಡಿತವಾಗಿರುವ ಸಂದೇಶ ಹೋಗಿದೆ. ಇದರಿಂದ ಗಾಬರಿಗೊಂಡ ಸಂತ್ರಸ್ತೆ ಬ್ಯಾಂಕ್​ಗೆ ಹೋಗಿ ವಿಚಾರಣೆ ಮಾಡಿದಾಗ ಸೈಬರ್​ ಖದೀಮನ ವಂಚನೆ ತಿಳಿದು ಬಂದಿದೆ. ತಕ್ಷಣ ಸೈಬರ್​ ಠಾಣೆಯ ಮೆಟ್ಟಿಲೇರಿರುವ ಮಹಿಳೆ ಪೆದ್ದಪಂಜನಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೊಬೈಲ್​ ಸಂಖ್ಯೆಯ​ ಆಧಾರದ ಮೇಲೆ ಸೈಬರ್​ ಸೈಬರ್ ಖದೀಮನ​ ಜಾಡನ್ನು ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ.

Ads on article

Advertise in articles 1

advertising articles 2

Advertise under the article