-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಎಟಿಎಂ ಕಾರ್ಡ್ ಅವಧಿ ಮುಗಿದಿದೆ ಎಂದು ಮಹಿಳೆಯ  ಖಾತೆಯಿಂದ 74 ಸಾವಿರ ರೂ. ಎಗರಿಸಿದ ಸೈಬರ್ ಖದೀಮ

ಎಟಿಎಂ ಕಾರ್ಡ್ ಅವಧಿ ಮುಗಿದಿದೆ ಎಂದು ಮಹಿಳೆಯ ಖಾತೆಯಿಂದ 74 ಸಾವಿರ ರೂ. ಎಗರಿಸಿದ ಸೈಬರ್ ಖದೀಮ


ಚಿತ್ತೂರು: ಇತ್ತೀಚಿನ ದಿನಗಳಲ್ಲಿ ಸೈಬರ್​ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದೆ. ಜನರನ್ನು ವಂಚನೆ ಮಾಡಿ ಸರ್ಕಾರಿ ಯೋಜನೆಗಳ ಹೆಸರಲ್ಲಿ ಕೆವೈಸಿ, ಬ್ಯಾಂಕ್​ ಖಾತೆ ಮತ್ತು ಎಟಿಎಂ ವಿವರಗಳನ್ನು ಪಡೆಯುವ ಅವರ ಬ್ಯಾಂಕ್​ ಖಾತೆಯಲ್ಲಿರುವ ದುಡ್ಡನ್ನು ಸೈಬರ್​ ಖದೀಮರು ಎಗರಿಸುತ್ತಿರುವ ಸಾಕಷ್ಟು ಪ್ರಕರಣಗಳು ದಾಖಲಾಗುತ್ತಿವೆ. ಸೈಬರ್​ ಖದೀಮರ ಮಾತಿಗೆ ಮರುಳಾಗುವ ಜನರು ಸ್ವಲ್ಪವೂ ಯೋಚನೆ ಮಾಡದೆ ಅವರು ಕೇಳುವ ವಿವರಗಳನ್ನೆಲ್ಲಾ ನೀಡಿ ಮೋಸ ಹೋಗುತ್ತಿದ್ದಾರೆ. 

ಇದೇ ರೀತಿಯ ಪ್ರಕರಣವೊಂದು ಇತ್ತೀಚೆಗೆ ಆಂಧ್ರದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ. ಈ ಬಗ್ಗೆ ಸೈಬರ್​ ಠಾಣೆಯಲ್ಲಿ ದೂರು ದಾಖಲಾಗಿದೆ. ಪೆದ್ದಪಂಜನಿ ವಲಯದ ನಾಗಿರೆಡ್ಡಿಪಲ್ಲಿ ಪಂಚಾಯತ್ ಚಲವರಿಪಲ್ಲಿ ಗ್ರಾಮದ ನಿವಾಸಿ ಮಂಜುಳಾ ವಂಚನೆಗೊಳಗಾದವರು‌. ಈಕೆ ರಾಯಲಪೇಟೆಯ ಇಂಡಿಯನ್​ ಬ್ಯಾಂಕ್​ನಲ್ಲಿ ಸೇವಿಂಗ್ಸ್​ ಖಾತೆಯನ್ನು ಹೊಂದಿದ್ದಾರೆ. 

ಸಂತ್ರಸ್ತೆಯ ಬ್ಯಾಂಕ್​ ಖಾತೆಗೆ ಲಿಂಕ್​ ಆಗಿರುವ ಪತಿಯ ಮೊಬೈಲ್ ಸಂಖ್ಯೆ​ಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿದ್ದಾನೆ. ನಾನು ಬ್ಯಾಂಕ್​ ಮ್ಯಾನೇಜರ್​ ಮಾತನಾಡುತ್ತಿದ್ದೇನೆ ಎಂದು ಪರಿಚಯಿಸಿದ್ದಾನೆ. ಆತ ನಿಮ್ಮ ಎಟಿಎಂ ಕಾರ್ಡ್​ ನ ಅವಧಿ ಮುಗಿದಿದೆ ಎಂದು ಹೇಳಿ, ಆಧಾರ್​ ನಂಬರ್​ ಮತ್ತು ಅಕೌಂಟ್​ ನಂಬರ್​ ಅಪ್ಡೇಟ್​ ಮಾಡಬೇಕಿದೆ ಎಂದು ಕೇಳಿದ್ದಾನೆ. ತಕ್ಷಣ ಹಿಂದೆ ಮುಂದೆ ಯೋಚನೆ ಮಾಡದೆ ಅಪರಿಚಿತ ಕೇಳಿರುವ ಎಲ್ಲಾ ವಿವರಗಳನ್ನು ಮಹಿಳೆ ನೀಡಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಮತ್ತೆ ಕರೆ ಮಾಡಿ ಒಟಿಪಿ ನಂಬರ್​ ಹೇಳುವಂತೆ ಕೇಳಿದ್ದಾನೆ. ಅದನ್ನು ಸಂತ್ರಸ್ತೆ ಹೇಳಿದ್ದಾಳೆ. 

ಇದಾದ ಕೆಲವೇ ಕ್ಷಣಗಳಲ್ಲಿ ಆಕೆಯ ಬ್ಯಾಂಕ್​ ಖಾತೆಯಿಂದ ಸೈಬರ್​ ಖದೀಮ 74,571 ರೂ. ಹಣ ಎಗರಿಸಿದ್ದಾನೆ. ತಕ್ಷಣ ವಂಚನೆಗೊಳಗಾದ ಮಹಿಳೆಯ ಮೊಬೈಲ್ ಗೆ ಹಣ ಕಡಿತವಾಗಿರುವ ಸಂದೇಶ ಹೋಗಿದೆ. ಇದರಿಂದ ಗಾಬರಿಗೊಂಡ ಸಂತ್ರಸ್ತೆ ಬ್ಯಾಂಕ್​ಗೆ ಹೋಗಿ ವಿಚಾರಣೆ ಮಾಡಿದಾಗ ಸೈಬರ್​ ಖದೀಮನ ವಂಚನೆ ತಿಳಿದು ಬಂದಿದೆ. ತಕ್ಷಣ ಸೈಬರ್​ ಠಾಣೆಯ ಮೆಟ್ಟಿಲೇರಿರುವ ಮಹಿಳೆ ಪೆದ್ದಪಂಜನಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೊಬೈಲ್​ ಸಂಖ್ಯೆಯ​ ಆಧಾರದ ಮೇಲೆ ಸೈಬರ್​ ಸೈಬರ್ ಖದೀಮನ​ ಜಾಡನ್ನು ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ.

Ads on article

Advertise in articles 1

advertising articles 2

Advertise under the article

ಸುರ