-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಮಂಗಳೂರಿನಲ್ಲಿ ಅಮಾನವೀಯ ಕೃತ್ಯ ಮೆರೆದಿದ್ದ 6 ಮಂದಿ ಅರೆಸ್ಟ್- ಮೊಬೈಲ್ ಕದ್ದನೆಂದು ಆರೋಪ ಮಾಡಿ ಉಲ್ಟಾ ನೇತು ಹಾಕಿದ್ದ ಕಟುಕರು!

ಮಂಗಳೂರಿನಲ್ಲಿ ಅಮಾನವೀಯ ಕೃತ್ಯ ಮೆರೆದಿದ್ದ 6 ಮಂದಿ ಅರೆಸ್ಟ್- ಮೊಬೈಲ್ ಕದ್ದನೆಂದು ಆರೋಪ ಮಾಡಿ ಉಲ್ಟಾ ನೇತು ಹಾಕಿದ್ದ ಕಟುಕರು!

 


 

ಮಂಗಳೂರು: ಮೊಬೈಲ್ ಕದ್ದಿರುವ ಆರೋಪ ಮಾಡಿ ಜೊತೆಗಾರ ಮೀನುಗಾರನನ್ನು ಕಾಲಿಗೆ ಹಗ್ಗ ಕಟ್ಟಿ ನೇತು ಹಾಕಿ ಹಲ್ಲೆ ನಡೆಸಿದ ಆರು ಮಂದಿ ಕಟುಕರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.




 

ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕೊಂಡೂರು ಪೋಲಯ್ಯ (23),  ಅವುಲ ರಾಜ್ ಕುಮಾರ್ (26),  ಕರಪಿಂಗಾರ ರವಿ (27), ಪುಲಯಕಾವೇರಿ ಗೋವಿಂದಯ್ಯ (47) ಪ್ರಕಾಶಂ ಜಿಲ್ಲೆಯ  ಕಾಟಂಗರಿ ಮನೋಹರ್ (21),  ವೂಟುಕೋರಿ ಜಾಲಯ್ಯ( 30) ಬಂಧಿತರು.

 

ಘಟನೆಯ ವಿವರ: ಡಿಸೆಂಬರ್ 15 ರಂದು ಈ ಏಳು ಮಂದಿ ಆಂಧ್ರಪ್ರದೇಶದ ಮೂಲದ ಮೀನುಗಾರರು ಮೀನುಗಾರಿಕೆಗೆ ತೆರಳಬೇಕಿತ್ತು. ಇದಕ್ಕಾಗಿ ಇದರ ಮೊದಲ ದಿನ ಡಿಸೆಂಬರ್ 14 ರಂದು ಸಣ್ಣ ಪಾರ್ಟಿ ಮಾಡಿದ್ದರು. ಈ ಸಂದರ್ಭದಲ್ಲಿ ಆರೋಪಿಗಳಲ್ಲಿ ಓರ್ವನ ಮೊಬೈಲ್ ಕಳವಾಗಿತ್ತು. ಈ ಮೊಬೈಲನ್ನು  ತಮ್ಮ ಜೊತೆಗಿದ್ದ ಆಂಧ್ರಪ್ರದೇಶ ಮೂಲದ ಮೀನುಗಾರ  ವೈಲ ಶೀನು ಎಂಬಾತ ಕದ್ದಿದ್ದಾನೆ ಎಂಬ ಶಂಕೆಯಲ್ಲಿ ಈ ಆರು ಮಂದಿ ಹಲ್ಲೆ ನಡೆಸಿದ್ದರು. ಆತನ ಕಾಲನ್ನು ಕಟ್ಟಿ ಹಾಕಿ ಬಲೆ ತಲೆಕೆಳಗು ಮಾಡಿ ಉಲ್ಟಾ ನೇತು ಹಾಕಿ ಹಲ್ಲೆ ಮಾಡಲಾಗಿತ್ತು. ಈ ಘಟನೆಯ ಬಳಿಕ ಹಲ್ಲೆಗೊಳಗಾದ ವೈಲ ಶೀನು ಕಾರವಾರಕ್ಕೆ ಹೋಗಿದ್ದರೆ ,ಬಂಧನದ ಭೀತಿಯಲ್ಲಿ ಆರೋಪಿಗಳು ತಲೆಮರೆಸಿಕೊಂಡಿದ್ದರು.

 

ಈ ಘಟನೆಯ ವಿಡಿಯೋವೊಂದು ಪೊಲೀಸರ ಕೈಸೇರಿತ್ತು. ಈ ಘಟನೆ ತಮಿಳುನಾಡಿನಲ್ಲಿ ಆಗಿರಬಹುದೆಂದು ಮೊದಲು ಪೊಲೀಸರು ಅಂದಾಜಿಸಿದ್ದರು. ಆದರೆ ಆ ಬಳಿಕ ಇದು ಮಂಗಳೂರಿನಲ್ಲಿ ನಡೆದಿದೆ ಎಂದು ತಿಳಿದ ಬಳಿಕ ಪೊಲೀಸರು ಸಂತ್ರಸ್ತನನ್ನು ಪತ್ತೆ ಹಚ್ಚಲು ಯಶಸ್ವಿಯಾದರು. ಬಳಿಕ ಆತ ನೀಡಿದ ದೂರಿನ ಆಧಾರದಲ್ಲಿ ಆರು ಮಂದಿಯನ್ನು ಬಂಧಿಸಿದ್ದಾರೆ.





Ads on article

Advertise in articles 1

advertising articles 2

Advertise under the article