-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ತಾಯಿ ಸೇರಿದಂತೆ ಮೂವರು ಮಕ್ಕಳು ದಿಢೀರ್ ನಾಪತ್ತೆ: ಕಾರಣ ನಿಗೂಢ

ತಾಯಿ ಸೇರಿದಂತೆ ಮೂವರು ಮಕ್ಕಳು ದಿಢೀರ್ ನಾಪತ್ತೆ: ಕಾರಣ ನಿಗೂಢ

ಅನಂತಪುರ: ತಾಯಿ ಸೇರಿ ಮೂವರು ಮಕ್ಕಳು ದಿಢೀರ್ ನಾಪತ್ತೆಯಾಗಿರುವ ಘಟನೆ ಆಂಧ್ರ ಪ್ರದೇಶದ ಅನಂತಪುರದಲ್ಲಿ ನಡೆದಿದೆ. 

ಅನಂತಪುರದ ಮಾರುತಿನಗರದ ನಿವಾಸಿಯಾದ ಸಂಗಮೇಶ್​ ಪತ್ನಿ ಸೈಮೌನಿಕಾ ಹಾಗೂ ಲಿಖಿತ ಶರಣ್ಯಾ, ಲಿಖಿತ ಕಾರ್ತಿಕೇಯನ್​ ಮತ್ತು ಮನಿಕೃಷ್ಣ ನಾಪತ್ತೆಯಾದ ಮಕ್ಕಳು.

ಸಂಗಮೇಶ್​ ಮತ್ತು ಮೌನಿಕಾ ದಂಪತಿಗೆ 2011ರಲ್ಲಿ ಮದುವೆಯಾಗಿದೆ. ಇವರಿಗೆ ಲಿಖಿತ ಶರಣ್ಯ ಎಂಬ ಹೆಣ್ಣು ಮಗಳು ಹಾಗೂ ಲಿಖಿತ ಕಾರ್ತಿಕೇಯನ್​ ಮತ್ತು ಮನಿಕೃಷ್ಣ ಹೆಸರಿನ ಇಬ್ಬರು ಗಂಡು ಮಕ್ಕಳಿದ್ದಾರೆ. ಸಂಗಮೇಶ್​ ಕುಟುಂಬದ ನಿರ್ವಹಣೆಗಾಗಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೀಗ ಸಂಗಮೇಶ್​  
ಅವರ ಪತ್ನಿ ಸೇರಿದಂತೆ ತನ್ನ ಮೂವರು ಮಕ್ಕಳು ಕೂಡ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ. 

ಸಂಗಮೇಶ್​ ಪತ್ನಿ ಮೌನಿಕಾ ಮಕ್ಕಳನ್ನು ಶಾಲೆಗೆ ಬಿಟ್ಟು ಬರುತ್ತೇನೆಂದು ಹೇಳಿ ಸೋಮವಾರ ಬೆಳಗ್ಗೆ ಮನೆ ಬಿಟ್ಟವರು ಮತ್ತೆ ಮನೆಗೆ ಮರಳಿ ಬರಲೇ ಇಲ್ಲ. ಮಕ್ಕಳ ಶಾಲೆ ಹಾಗೂ ಎಲ್ಲಾ ಕಡೆಗಳಲ್ಲಿ ವಿಚಾರಿಸಿದಾಗಲೂ ಯಾವುದೇ ಮಾಹಿತಿ ಸಿಗದೇ ಇದ್ದಾಗ ಕೊನೆಗೆ ಪೊಲೀಸ್​ ಠಾಣೆಗೆ ಸಂಗಮೇಶ್​ ದೂರು ನೀಡಿದ್ದಾರೆ.

ಸದ್ಯ ಒಂದೇ ಕುಟುಂಬದ ನಾಲ್ವರು ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿರುವುದಾಗಿ ಅನಂತಪುರ ಪೊಲೀಸ್​ ಠಾಣೆಯ ಸರ್ಕಲ್​ ಇನ್ಸ್​ಪೆಕ್ಟರ್​ ಕತ್ತಿ ಶ್ರೀನಿವಾಸನ್​ ಮಾಹಿತಿ ನೀಡಿದ್ದಾರೆ.

Ads on article

Advertise in articles 1

advertising articles 2

Advertise under the article