-->

ಇಬ್ಬರು ಮಕ್ಕಳ ತಾಯಿ ಪ್ರೀತಿ ಬಲೆಗೆ ಬಿದ್ದಾತ ತೆತ್ತ ಬೆಲೆ ಅಂತಿಂಥದ್ದಲ್ಲ: ಇನ್ನೀಗ ಆತನ ಬಾಳು ಪೂರಾ ಕತ್ತಲೆ!

ಇಬ್ಬರು ಮಕ್ಕಳ ತಾಯಿ ಪ್ರೀತಿ ಬಲೆಗೆ ಬಿದ್ದಾತ ತೆತ್ತ ಬೆಲೆ ಅಂತಿಂಥದ್ದಲ್ಲ: ಇನ್ನೀಗ ಆತನ ಬಾಳು ಪೂರಾ ಕತ್ತಲೆ!

ಇಡುಕ್ಕಿ: ಪ್ರೇಯಸಿಯೇ ನಡೆಸಿರುವ ಆ್ಯಸಿಡ್ ದಾಳಿಯಿಂದ ಕೇರಳದ ಪೂಜಾಪ್ಪುರ ಮೂಲದ ಯುವಕನೋರ್ವನು ತನ್ನ ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡಿರುವ ಆತಂಕಕಾರಿ ಘಟನೆ ನಡೆದಿದೆ.

ಆ್ಯಸಿಡ್​ ದಾಳಿ ನಡೆಸಿದ ಆದಿಮಲಿ ಮೂಲದ ಶೀಬಾ (35) ಎಂಬಾಕೆಯನ್ನು ಪೊಲೀಸರು ಆಕೆಯ ಪತಿಯ ಮನೆಯ ಮನೆಯಿಂದಲೇ ಬಂಧಿಸಿದ್ದಾರೆ. 

ಆ್ಯಸಿಡ್ ದಾಳಿ ಪ್ರಕರಣವು ಮಂಗಳವಾರ ಇರುಂಪುಪಳಂ ಚರ್ಚ್​ ಬಳಿ ನಡೆದಿತ್ತು‌. ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ಫೂಟೇಜ್ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು.  ತಕ್ಷಣ ದಾಳಿಗೊಳಗಾಗಿರುವ ಅರುಣ್​ ಎಂಬಾತನನ್ನು ಅಲ್ಲಿಯೇ ಇದ್ದ ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತ ಚಿಕಿತ್ಸೆ ಪಡೆಯುತ್ತಿದ್ದು, ಆದರೆ​ ದೃಷ್ಟಿ ಕಳೆದುಕೊಂಡಿದ್ದಾರೆಂದು ತಿಳಿದುಬಂದಿದೆ. 

ಸದ್ಯ ತಿರುವನಂತಪುರಂನ ಮೆಡಿಕಲ್​ ಕಾಲೇಜಿನಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಪೂಜಾಪ್ಪುರ ಮೂಲದ ಅರುಣ್​ ಕುಮಾರ್​ ಹಾಗೂ ಶೀಬಾ ಪರಸ್ಪರ ಫೇಸ್​ಬುಕ್ ಮೂಲಕ ಪರಿಚಯವಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಚಾಟಿಂಗ್​ ಮಾಡುತ್ತಾ ಇಬ್ಬರೂ ಪ್ರೀತಿಯ ಬಲೆಗೆ ಬಿದ್ದಿದ್ದಾರೆ. ಆದರೆ, ಶೀಬಾಗೆ ಅದಾಗಲೇ ವಿವಾಹವಾಗಿ, ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿದ ಬಳಿಕ ಅರುಣ್​, ಪ್ರೀತಿಗೆ ಗುಡ್​ ಬೈ ಹೇಳಿದ್ದಾರೆ. 

ಆದರೆ, ಶೀಬಾ ಮಾತ್ರ ತನ್ನನ್ನು ವಿವಾಹವಾಗುವಂತೆ ದುಂಬಾಲು ಬಿದ್ದಿದ್ದಾಳೆ. ಇದಾದ ಬಳಿಕ ಶೀಬಾ 2 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ. ಬಳಿಕ ಯಾವುದೋ ವಿಚಾರವನ್ನು ಮಾತನಾಡಬೇಕೆಂದು ಹೇಳಿ ಆದಿಮಲಿಗೆ ಬರುವಂತೆ ಶೀಬಾ ಹೇಳಿದ್ದಳು. ಆಕೆ ಹೇಳಿದ್ದಲ್ಲಿಗೆ ಅರುಣ್ ಕುಮಾರ್ ಹೋದ ಬೆನ್ನಲ್ಲೇ ಶೀಬಾ ಆ್ಯಸಿಡ್​ ದಾಳಿ ಮಾಡಿದ್ದಾಳೆ ಎಂದು ಅರುಣ್​ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.

ಆರೋಪಿತೆ ಶೀಬಾಳನ್ನು ಪೊಲೀಸರು ಆಕೆಯ ಪತಿಯ ಮನೆಯಿಂದಲೇ ಬಂಧಿಸಿದ್ದಾರೆ. ದಾಳಿಯ ವೇಳೆ ಆಕೆಯ ಕೈಗಳಿಗೂ ಆ್ಯಸಿಡ್​ ಬಿದ್ದು ಸುಟ್ಟ ಗಾಯಗಳಾಗಿವೆ. ರಬ್ಬರ್​ ಹೆಪ್ಪುಗಟ್ಟಿಸಲು ಬಳಸುತ್ತಿದ್ದ ಆ್ಯಸಿಡ್​ನಿಂದ ಆಕೆ ಅರುಣ್ ಮೇಲೆ ದಾಳಿ ಮಾಡಿರುವುದು ಬೆಳಕಿಗೆ ಬಂದಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Ads on article

Advertise in articles 1

advertising articles 2

Advertise under the article