-->

ಮಂಗಳೂರಿನ ಬಾಂಬೆ ಲಕ್ಕಿ  ಹೋಟೆಲ್ ಮಾಲಕ ನಿಧನ

ಮಂಗಳೂರಿನ ಬಾಂಬೆ ಲಕ್ಕಿ ಹೋಟೆಲ್ ಮಾಲಕ ನಿಧನ

 



ಮಂಗಳೂರು: ಮಂಗಳೂರಿನಲ್ಲಿ ಖ್ಯಾತಿ ಪಡೆದಿರುವ ಬಾಂಬೆ ಲಕ್ಕಿ  ಹೋಟೆಲ್  ಮಾಲಕ ಹಾಜಿ ಎಂ. ಸುಲೈಮಾನ್ ಇಂದು ನಿಧನರಾಗಿದ್ದಾರೆ.

 

ನಗರದ ಬಂದರ್ ನಲ್ಲಿರುವ ಬಾಂಬೆ ಲಕ್ಕಿ ಹೋಟೆಲ್ ಕರಾವಳಿಯಲ್ಲಿ ಖ್ಯಾತಿವೆತ್ತ ಹೋಟೆಲ್ ಆಗಿದೆ.

ಹಾಜಿ ಎಂ. ಸುಲೈಮಾನ್ ( 84 ) ಪತ್ನಿ, 5 ಪುತ್ರರು ಮತ್ತು ಎರಡು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೂಲತಃ ಕುದ್ರೋಳಿಯವರಾದ ಹಾಜಿ ಸುಲೈಮಾನ್ ಅವರು ನಗರದ ಪಾಂಡೇಶ್ವರದಲ್ಲಿ ನೆಲೆಸಿದ್ದರು. ಕುದ್ರೋಳಿ ಜಾಮಿಯಾ ಮಸೀದಿಯ ಟ್ರಸ್ಟಿಯಾಗಿ ಕೂಡ ಸೇವೆ ಸಲ್ಲಿಸುತ್ತಿದ್ದರು

ಹಾಜಿ ಸುಲೈಮಾನ್ ಅವರು, ಕೊಡುಗೈ ದಾನಿಯೆಂದು ಗುರುತಿಸಿಕೊಂಡಿದ್ದರು.  

Ads on article

Advertise in articles 1

advertising articles 2

Advertise under the article