-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಯುವತಿಗಾಗಿ ಕಾಲೇಜು ಸಹಪಾಠಿಗಳಿಬ್ಬರ ಮಧ್ಯೆ ಕಿತ್ತಾಟ ಓರ್ವನ ಕೊಲೆಯಲ್ಲಿ ಅಂತ್ಯ!

ಯುವತಿಗಾಗಿ ಕಾಲೇಜು ಸಹಪಾಠಿಗಳಿಬ್ಬರ ಮಧ್ಯೆ ಕಿತ್ತಾಟ ಓರ್ವನ ಕೊಲೆಯಲ್ಲಿ ಅಂತ್ಯ!

ಬೆಂಗಳೂರು: ಯುವತಿಯೋರ್ವಳನ್ನು ಪ್ರೀತಿಸುವ ವಿಚಾರದಲ್ಲಿ ಕಾಲೇಜು ಸಹಪಾಠಿಗಳಿಬ್ಬರ ನಡುವೆ ನಡೆದ ಕಿತ್ತಾಟ ಓರ್ವನಕ ಕೊಲೆಯಲ್ಲಿ ಅಂತ್ಯವಾಗಿದೆ‌. ಬೆಂಗಳೂರಿನ ಲಾಲ್​ ಬಹದ್ದೂರ್​ ಶಾಸ್ತ್ರಿ ನಗರದಲ್ಲಿ ಹಾಡಹಗಲೇ ನಡುರಸ್ತೆಯಲ್ಲಿಯೇ ಹೆಣ ಬಿದ್ದಿದೆ. 

ಲಿಖಿತ್ ಎಂಬ ವಿದ್ಯಾರ್ಥಿ ಎಂಬಾತ ಕೊಲೆಯಾದಾತ. ನಯೀದ್ ಕೊಲೆ ಮಾಡಿದಾತ.

ನಯೀದ್ ಹಾಗೂ ಲಿಖಿತ್ ಎಂಬಿಬ್ಬರು ಯುವಕರು ಕಾಲೇಜಿನಲ್ಲಿ ಸಹಪಾಠಿಗಳಾಗಿದ್ದರು. ಇವರಿಬ್ಬರು ಓರ್ವ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದು, ಅದೇ ವಿಚಾರವಾಗಿ ಇಬ್ಬರೂ ವೈಮನಸ್ಸು ಹೊಂದಿದ್ದರು. ಯುವತಿಯ ವಿಚಾರವಾಗಿ ಮಾತನಾಡಲು ಲಿಖಿತ್ ನಯೀದ್​ನನ್ನು ಬರಲು ಹೇಳಿದ್ದ. ಈ ಸಂದರ್ಭದಲ್ಲಿ ಇಬ್ಬರ ಮಧ್ಯೆ ವಾಗ್ವಾದ ಬೆಳೆದಿದೆ. ಇದು  ವಿಕೋಪಕ್ಕೆ ಹೋಗಿ ಲಿಖಿತ್ ಡ್ಯಾಗರ್​ನಿಂದ ನಯೀದ್​ಗೆ ಇರಿಯಲು ಮುಂದಾಗಿದ್ದು, ಆಗ ಆ ಡ್ಯಾಗರ್ ಕಿತ್ತುಕೊಂಡ ನಯೀದ್​ ಲಿಖಿತ್​ಗೆ ಚುಚ್ಚಿದ್ದರಿಂದ ಆತ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ ಎನ್ನಲಾಗಿದೆ. 

ಸ್ಥಳಕ್ಕೆ ಎಚ್​ಎಎಲ್ ಪೊಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದು, ನಯೀದ್ ನನ್ನು ವಶಪಡಿಸಿಕೊಂಡಿದ್ದಾರೆ.

Ads on article

Advertise in articles 1

advertising articles 2

Advertise under the article