ಕಾರ್ಕಳ ಪುರಸಭೆಗೆ ನಾಮ ನಿರ್ದೇಶನಗೊಂಡ ಸದಸ್ಯರಿಂದ ಅಧ್ಯಕ್ಷರ ಭೇಟಿ


ಕರ್ನಾಟಕ ಸರಕಾರದಿಂದ ಕಾರ್ಕಳ ಪುರಸಭೆಗೆ ನಾಮ ನಿರ್ದೇಶನಗೊಂಡ ಪುರಸಭಾ  ಸದಸ್ಯರುಗಳಾದ ಶ್ರೀ ಶಿವಾಜಿ ರಾವ್, ಶ್ರೀ ನಾಗೇಶ್ ಹೆಗ್ಡೆ, ಶ್ರೀ ಪ್ರಸನ್ನ ಶೆಟ್ಟಿಗಾರ್, ಶ್ರೀ ಸುನೀಲ್ ದೇವಾಡಿಗ ಇಂದು ಪುರಸಭಾ ಅಧ್ಯಕ್ಷ ಯೋಗೀಶ್ ದೇವಾಡಿಗರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿದರು.

 ಈ ಸಂದರ್ಭದಲ್ಲಿ ನೂತನ ಸದಸ್ಯರನ್ನು ಗೌರವಿಸಲಾಯಿತು, ಉಪಾಧ್ಯಕ್ಷ ಪ್ರಶಾಂತ್ ಕೋಟ್ಯಾನ್, ಸ್ಥಾಯಿ ಸಮಿತಿ ಅದ್ಯಕ್ಷ ಪ್ರದೀಪ್ ರಾಣೆ, ಪುರಸಭಾ ಸದಸ್ಯ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಶುಭದರಾವ್, ಪುರಸಭಾ ಸದಸ್ಯರಾದ  ಸೋಮನಾಥ್ ನಾಯಕ್, ಭೂ ನ್ಯಾಯ ಮಂಡಲಿಯ ಸದಸ್ಯ ಸುನೀಲ್ ಭಂಡಾರಿ, ಮಾಜಿ ಸದಸ್ಯ ವಂದನಾ ಜತ್ತನ್ನಾ ಉಪಸ್ಥಿತರಿದ್ದರು.
BREAKING NEWS
Loading latest news...
Join our WhatsApp Channel Powered By : Online Pudu