-->
1000938341
ಮಂಗಳೂರು: ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ 'ಡಿ ಬಾಸ್' ಭೇಟಿ

ಮಂಗಳೂರು: ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ 'ಡಿ ಬಾಸ್' ಭೇಟಿ

ಮಂಗಳೂರು: ಕೊರಗಜ್ಜ ದೈವದ ಆದಿಸ್ಥಳ ಕುತ್ತಾರು ಕ್ಷೇತ್ರಕ್ಕೆ ಭೇಟಿ‌ ನೀಡಿದ ಸ್ಯಾಂಡಲ್ ವುಡ್ 'ಡಿ ಬಾಸ್' ಕೊರಗಜ್ಜ ದೈವದ ದರ್ಶನ ಪಡೆದರು.

ಈ ವೇಳೆ ಕೊರಗಜ್ಜನ ಕ್ಷೇತ್ರದ ವತಿಯಿಂದ ನಟ ದರ್ಶನ್ ಗೆ ಗೌರವ ಸಮರ್ಪಣೆ ಮಾಡಲಾಯಿತು. ಬಳಿಕ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ನಾನು ಕುತ್ತಾರು ಕೊರಗಜ್ಜ ದೈವದ ಸನ್ನಿಧಿಗೆ ಭೇಟಿ ನೀಡಿದ್ದೇನೆ. ಈ ಹಿಂದೆ ನಾನು ಮಂಗಳೂರಿಗೆ ಬಹಳ ಸಲ ಬಂದಿದ್ದರೂ ಈ ಕ್ಷೇತ್ರಕ್ಕೆ ಭೇಟಿ ನೀಡಿರಲಿಲ್ಲ. ಆದ್ದರಿಂದ ಈ ಕ್ಷೇತ್ರವನ್ನೊಮ್ಮೆ ನೋಡಿಕೊಂಡು ಹೋಗೋಣ ಎಂದು ಬಂದಿದ್ದೇನೆ. 




ಸಂಸದೆ ಸುಮಲತಾ ಬೆಂಬಲ ವಿಚಾರದ ಬಗ್ಗೆ ಮಾತನಾಡಿದ ದರ್ಶನ್, ಅಮ್ಮ ಅಮ್ಮನೇ. ನಾವು ಅವಳೊಂದಿಗೆನೇ‌ ಇರೋದು. ಬೇರೆಯವರಿಗಾಗಿ ಅಮ್ಮನನ್ನು ಬಿಡೋಕಾಗುತ್ತಾ? ಎಂದು ಪರೋಕ್ಷವಾಗಿ ಸಂಸದೆ ಸುಮಲತಾ ಬೆಂಬಲಿಸುವ ಹೇಳಿಕೆ ನೀಡಿದರು.

Ads on article

Advertise in articles 1

advertising articles 2

Advertise under the article