-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಗೇಮ್ ಆ್ಯಪ್ ಪ್ರಕರಣ: ರಣಬೀರ್ ಕಪೂರ್ ಗೆ ಇಡಿಯಿಂದ ಸಮನ್ಸ್

ಗೇಮ್ ಆ್ಯಪ್ ಪ್ರಕರಣ: ರಣಬೀರ್ ಕಪೂರ್ ಗೆ ಇಡಿಯಿಂದ ಸಮನ್ಸ್

ಹೊಸದಿಲ್ಲಿ: ಆನ್ ಲೈನ್ ಗೇಮ್ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ರಣಬೀರ್ ಕಪೂರ್ ಗೆ ಇಡಿ ಸಮನ್ಸ್ ಜಾರಿಗೊಳಿಸಿದೆ. ಅವರು ಶುಕ್ರವಾರ ಇಡಿಯ ಮುಂದೆ ಹಾಜರಾಗಬೇಕಿದೆ ವರದಿಯಾಗಿದೆ.

ರಣಬೀರ್ ಕಪೂರ್ ಅವರು ಮಹಾದೇವ್ ಆನ್ ಲೈನ್ ಬುಕ್ ಆ್ಯಪ್ ನ ಪ್ರಚಾರ ಜಾಹೀರಾತಿನಲ್ಲಿ  ಕಾಣಿಸಿಕೊಂಡಿದ್ದರು. ಇದಕ್ಕಾಗಿ ಅವರಿಗೆ ದೊಡ್ಡ ಮೊತ್ತದ ಸಂಭಾವನೆ ನೀಡಲಾಗಿತ್ತು ಎಂದು ಇಡಿ ಆರೋಪಿಸಿದೆ. ರಣಬೀರ್ ಕಪೂರ್ ಮಾತ್ರವಲ್ಲದೆ, ಬಾಲಿವುಡ್ ಮತ್ತು ಟಾಲಿವುಡ್ ನ ಮತ್ತೆ ಹನ್ನೆರಡು ನಟರು ಇಡಿಯ ಕಣ್ಗಾವಲಿನಲ್ಲಿದ್ದಾರೆ. ಇದಲ್ಲದೆ ಕನಿಷ್ಠ 100 ಮಂದಿ ಪ್ರಭಾವಿಗಳ ಮೇಲೂ ಇಡಿ ದೃಷ್ಟಿಯಿಟ್ಟಿದೆ‌. ಎಲ್ಲರಿಗೂ ತನಿಖೆಯ ಅಂಗವಾಗಿ ಸಮನ್ಸ್ ಜಾರಿಗೊಳಿಸುವ ಸಾಧ್ಯತೆಯಿದೆ.

ಕಂಪನಿಯ ಮುಖ್ಯಸ್ಥ ಸೌರಭ್ ಚಂದ್ರಾಕರ್ ಹಾಗೂ ರವಿ ಉಪ್ಪಲ್ ಛತ್ತೀಸ್ ಗಢದ ಭಿಲಾಯಿ ಮೂಲದವರು‌. ಈ ಆ್ಯಪ್ ಕಂಪನಿಯ ಕೇಂದ್ರ ಕಚೇರಿಯಾದ ಯುಎಇಯಿಂದ ಕಾರ್ಯಾಚರಿಸುತ್ತಿದೆ. ಈ ಕಂಪನಿಯು ಶ್ರೀಲಂಕಾ, ನೇಪಾಳ ಹಾಗೂ ಯುಎಇಯಲ್ಲಿ ಕಾಲ್ ಸೆಂಟರ್ ಗಳನ್ನು ಹೊಂದಿದೆ. ಮಹಾದೇವ್ ಆ್ಯಪ್ ಅಂಬ್ರೆಲಾ ಸಿಂಡಿಕೇಟ್ ನ ಭಾಗವಾಗಿದ್ದು, ಹೊಸ ಬಳಕೆದಾರರ ನೋಂದಣಿ, ಬಳಕೆದಾರರ ಐಡಿ ಸೃಷ್ಟಿ ಹಾಗೂ ಬೇನಾಮಿ ಬ್ಯಾಂಕ್ ಖಾತೆಗಳನ್ನು ಹೊಂದಿರುವ ಹಲವಾರು ಅಂತರ್ಜಾಲ ತಾಣಗಳ ಮೂಲಕ ಅಕ್ರಮ ಬೆಟ್ಟಿಂಗ್ ಅಂತರ್ಜಾಲ ತಾಣಗಳನ್ನು ವ್ಯವಸ್ಥೆಗೊಳಿಸುವ ಆನ್ ಲೈನ್ ವೇದಿಕೆಯಾಗಿದೆ ಎಂದು ಜಾರಿ ನಿರ್ದೇಶನಾಲಯವು ಆರೋಪಿಸಿದೆ.

ಈ ಕಂಪೆನಿಯ ಪ್ರವರ್ತಕರು ಇಂತಹ 4-5 ಆ್ಯಪ್ ಗಳನ್ನು ನಡೆಸುತ್ತಿದ್ದು, ಈ ಆ್ಯಪ್ ಗಳು ಪ್ರತಿದಿನ 200 ಕೋಟಿ ರೂ. ಲಾಭವನ್ನು ಗಳಿಸುತ್ತಿವೆ. ಕಳೆದ ತಿಂಗಳು ಇಡಿ ಮಹಾದೇವ್ ಆ್ಯಪ್ ನೊಂದಿಗೆ ಸಂಪರ್ಕ ಹೊಂದಿರುವ ಅಕ್ರಮ ಹಣ ವರ್ಗಾವಣೆ ಜಾಲಗಳ ವಿರುದ್ಧ ಕೊಲ್ಕತ್ತಾ, ಭೋಪಾಲ್ ಹಾಗೂ ಮುಂಬೈ ಸೇರಿದಂತೆ ಹಲವಾರು ಸ್ಥಳಗಳ ಶೋಧನೆ ನಡೆಸಿ, ದೋಷಾರೋಪಣೆಗೆ ಅಗತ್ಯವಾದ ಸಾಕ್ಷ್ಯಗಳನ್ನು ಹೊರ ತೆಗೆದಿತ್ತು. ಇದಲ್ಲದೆ ಅಪರಾಧ ಪ್ರಕ್ರಿಯೆಗೆ ಸಂಬಂಧಿಸಿದ 417 ಕೋಟಿ ರೂ. ಮೊತ್ತವನ್ನು ಮುಟ್ಟುಗೋಲು ಹಾಕಿಕೊಂಡಿತ್ತು.

ಚಂದ್ರಾಕರ್ ಹಾಗೂ ಉಪ್ಪಲ್ ಯುಎಇಯಲ್ಲಿ ತಮ್ಮದೇ ಆದ ಸಾಮ್ರಾಜ್ಯವನ್ನು ಸ್ಥಾಪಿಸಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಯುಎಇಯಲ್ಲಿ ರಾಸ್ ಆಲ್ ಖೈಮಾದಲ್ಲಿ ವಿವಾಹವಾಗಿರುವ ಚಂದ್ರಾಕರ್, ತಮ್ಮ ವಿವಾಹ ಸಮಾರಂಭಕ್ಕಾಗಿ 200 ಕೋಟಿ ರೂ‌. ಖರ್ಚು ಮಾಡಿದ್ದಾರೆ. ಈ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ತಮ್ಮ ಕುಟುಂಬದ ಸದಸ್ಯರಿಗೆ ನಾಗಪುರದಿಂದ ಯುಎಇಗೆ ಖಾಸಗಿ ಜೆಟ್ ವಿಮಾನಗಳನ್ನು ಬಾಡಿಗೆ ಪಡೆದಿದ್ದು, ಆ ಸಮಾರಂಭದಲ್ಲಿ ಪ್ರದರ್ಶನ ನೀಡಲು ತಾರಾನಟರಿಗೆ ದೊಡ್ಡ ಮೊತ್ತವನ್ನು ಪಾವತಿಸಲಾಗಿತ್ತು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಕಾರ್ಯಕ್ರಮ ಆಯೋಜನೆಯ ಕಂಪೆನಿಯಾದ ಮೆಷರ್ಸ್ ಆರ್-1 ಇವೆಂಟ್ಸ್ ಪ್ರೈ.ಲಿ.ಗೆ ಹವಾಲಾ ಜಾಲದ ಮೂಲಕ 112 ಕೋಟಿ ರೂ. ಮೊತ್ತವನ್ನು ಪಾವತಿಸಲಾಗಿತ್ತು. ಹೋಟೆಲ್ ಅನ್ನು ಮುಂಗಡ ಕಾದಿರಿಸಲು 42 ಕೋಟಿ ರೂ. ನಗದನ್ನು ಪಾವತಿಸಲಾಗಿದೆ ಎಂದು ತಿಳಿಸಲಾಗಿದೆ. ಶುಕ್ರವಾರ ಇಡಿ ಕಚೇರಿಗೆ ರಣಬೀರ್ ಕಪೂರ್ ಅವರೇ ಖುದ್ದಾಗಿ ಹಾಜರಾಗುತ್ತಾರೋ ಅಥವಾ ತಮ್ಮ ಪ್ರತಿನಿಧಿಯನ್ನು ಕಳಿಸುತ್ತಾರೊ ಎಂಬುದು ಈವರೆಗೆ ದೃಢಪಟ್ಟಿಲ್ಲ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article