ನಿಹಾರಿಕಾ ಕ್ರಿಯೇಷನ್ಸ್ ರವರ ಮತ್ತೆ ಶುರುವಾಗಿದೆ ಹೃದಯದ ಮಾತು ಎಂಬ (ಆಲ್ಬಮ್ ಹಾಡು) ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
ಪ್ರೀತಿ ಪ್ರೇಮದ ವಿರಹ ಪ್ರೀತಿ ಮಾಡಿದ ಹುಡುಗನಿಂದ ಪ್ರೀತಿ ದೂರವಾದ ಮೇಲೆ ಆ ಪ್ರೀತಿಯ ನೆನಪು ಮತ್ತೆ ಮತ್ತೆ ಕಾಡುವ ಹಾಗೆ ಅವಳ ಪ್ರೀತಿಯ ನೆನಪಿನಂಗಳದಲ್ಲಿ ಮರೆಯಾದ ಸುಂದರ ಪ್ರೇಮ ವಿರಹದ ಗೀತೆಯನ್ನು ಇತ್ತೀಚೆಗಷ್ಟೇ ಸಕ್ಲೇಶಪುರ, ಹಾಸನ , ಬೆಂಗಳೂರು ಸುತ್ತಮುತ್ತ ಸುಂದರ ರಮಣೀಯ ಮನೋಹರಕವಾದ ತಾಣಗಳಲ್ಲಿ ಚಿತ್ರಕರಿಸಲಾಗಿದೆ.
ಈ ಗೀತೆಯನ್ನು ರಚಿಸಿ ಸಾಹಿತ್ಯ ಸಂಯೋಜನೆ ಮಾಡಿ ಹಾಡಿದವರು ಡಿ.ಕೆ. ಹಣಮಂತು ನಾರಾಯಣಪುರ (ಯಾದಗಿರಿ) . ಈ ಗೀತೆಯ ನೃತ್ಯವನ್ನು ತನ್ನ ಕ್ಯಾಮರಾದಲ್ಲಿ ಸೆರೆಹಿಡಿದವರು ಅಭಿಲಾಶ್, ಹಾಸನ್,
ಸಹಾಯಕ ನಾಗಿ ಇಂದ್ರ್ ಜಿತ್,(ಮಸ್ಕಿ) ಹಾಗೂ ಈ ಗೀತೆಗೆ ನೃತ್ಯ ಸಂಯೋಜನೆ ಪ್ರದೀಪ್ ನಂದಿ (ವಿಜಯಪುರ) ಅವರದು.
ಈ ಆಲ್ಬಮ್ ಹಾಡಿನಲ್ಲಿ ನಾಯಕಿಯಾಗಿ ಲಕ್ಷಿತ ಪೂಜಾರಿ (ಮಂಗಳೂರು) ಇವರ ಜೊತೆಯಾಗಿ ಮೌನೇಶ್ ರಾಠೋಡ್ (ಮಸ್ಕಿ) ನಾಯಕನಾಗಿ ಹೆಜ್ಜೆ ಹಾಕಿ ಜೊತೆಗೆ ಆಲ್ಬಮ್ ಹಾಡಿನ ಸಂಪೂರ್ಣ ವೆಚ್ಚವನ್ನು ಬರೆಸಿ ನಿರ್ಮಾಪಕರಾಗಿದ್ದಾರೆ, ಯಲಿಯೂರು ಪಿಳ್ಳೇಗೌಡ ರವರ ನಿರ್ದೇಶನವಿದೆ.