ಶೀಘ್ರದಲ್ಲಿ ನಿಹಾರಿಕಾ ಕ್ರಿಯೇಷನ್ಸ್ ರವರ ಮತ್ತೆ ಶುರುವಾಗಿದೆ ಹೃದಯದ ಮಾತು ಆಲ್ಬಮ್ ಹಾಡು ಬಿಡುಗಡೆ


ನಿಹಾರಿಕಾ ಕ್ರಿಯೇಷನ್ಸ್ ರವರ ಮತ್ತೆ ಶುರುವಾಗಿದೆ ಹೃದಯದ ಮಾತು ಎಂಬ (ಆಲ್ಬಮ್ ಹಾಡು) ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

 ಪ್ರೀತಿ ಪ್ರೇಮದ ವಿರಹ ಪ್ರೀತಿ ಮಾಡಿದ ಹುಡುಗನಿಂದ ಪ್ರೀತಿ ದೂರವಾದ ಮೇಲೆ ಆ ಪ್ರೀತಿಯ ನೆನಪು ಮತ್ತೆ ಮತ್ತೆ ಕಾಡುವ ಹಾಗೆ ಅವಳ ಪ್ರೀತಿಯ ನೆನಪಿನಂಗಳದಲ್ಲಿ ಮರೆಯಾದ ಸುಂದರ ಪ್ರೇಮ ವಿರಹದ ಗೀತೆಯನ್ನು ಇತ್ತೀಚೆಗಷ್ಟೇ ಸಕ್ಲೇಶಪುರ, ಹಾಸನ , ಬೆಂಗಳೂರು ಸುತ್ತಮುತ್ತ  ಸುಂದರ ರಮಣೀಯ ಮನೋಹರಕವಾದ ತಾಣಗಳಲ್ಲಿ ಚಿತ್ರಕರಿಸಲಾಗಿದೆ.

 
ಈ ಗೀತೆಯನ್ನು ರಚಿಸಿ ಸಾಹಿತ್ಯ ಸಂಯೋಜನೆ ಮಾಡಿ ಹಾಡಿದವರು ಡಿ.ಕೆ. ಹಣಮಂತು ನಾರಾಯಣಪುರ (ಯಾದಗಿರಿ) . ಈ ಗೀತೆಯ ನೃತ್ಯವನ್ನು ತನ್ನ ಕ್ಯಾಮರಾದಲ್ಲಿ ಸೆರೆಹಿಡಿದವರು ಅಭಿಲಾಶ್, ಹಾಸನ್, 
ಸಹಾಯಕ ನಾಗಿ ಇಂದ್ರ್ ಜಿತ್,(ಮಸ್ಕಿ) ಹಾಗೂ ಈ ಗೀತೆಗೆ ನೃತ್ಯ ಸಂಯೋಜನೆ ಪ್ರದೀಪ್ ನಂದಿ (ವಿಜಯಪುರ) ಅವರದು.



 ಈ ಆಲ್ಬಮ್ ಹಾಡಿನಲ್ಲಿ ನಾಯಕಿಯಾಗಿ ಲಕ್ಷಿತ ಪೂಜಾರಿ (ಮಂಗಳೂರು) ಇವರ ಜೊತೆಯಾಗಿ ಮೌನೇಶ್ ರಾಠೋಡ್ (ಮಸ್ಕಿ) ನಾಯಕನಾಗಿ ಹೆಜ್ಜೆ ಹಾಕಿ ಜೊತೆಗೆ ಆಲ್ಬಮ್ ಹಾಡಿನ ಸಂಪೂರ್ಣ ವೆಚ್ಚವನ್ನು ಬರೆಸಿ ನಿರ್ಮಾಪಕರಾಗಿದ್ದಾರೆ, ಯಲಿಯೂರು ಪಿಳ್ಳೇಗೌಡ ರವರ ನಿರ್ದೇಶನವಿದೆ.