-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಹೊರಡುವುದು ತಡವಾಯ್ತೆಂದು ಮದ್ಯದ ಮತ್ತಿನಲ್ಲಿ ಕೆಎಸ್ಆರ್ ಟಿಸಿ ಬಸ್ ಅನ್ನೇ ಚಲಾಯಿಸಿದ ಭೂಪ

ಹೊರಡುವುದು ತಡವಾಯ್ತೆಂದು ಮದ್ಯದ ಮತ್ತಿನಲ್ಲಿ ಕೆಎಸ್ಆರ್ ಟಿಸಿ ಬಸ್ ಅನ್ನೇ ಚಲಾಯಿಸಿದ ಭೂಪ


ಔರದ್: ಮದ್ಯದ ನಶೆಯಲ್ಲಿ ಕೆಲವರು ಏನೇನನ್ನೋ ಮಾಡುತ್ತಿರುತ್ತಾರೆ. ಸ್ಥಿಮಿತದಲ್ಲಿರದ ಇವರು ಕೆಲವೊಮ್ಮೆ ತಮ್ಮನ್ನು ಅಪಾಯಕ್ಕೆ ಸಿಲುಕಿಸುವುದರೊಂದಿಗೆ ಇತರರನ್ನೂ ತೊಂದರೆಗೆ ಸಿಲುಕಿಸುತ್ತಾರೆ. ಇಂತಹದ್ದೇ ಘಟನೆಯೊಂದು ಔರದ್ ನಲ್ಲಿ ಬೆಳಕಿಗೆ ಬಂದಿದೆ.

ಔರದ್ ಡಿಪೋದಿಂದ ಕೆಎಸ್ಆರ್ ಟಿಸಿ ಬಸ್ ಒಂದು ಗಂಟೆ ಕಳೆದರೂ ಹೊರಡಲಿಲ್ಲ. ಈ ವೇಳೆ ಸುಮಾರು ಹೊತ್ತಿನಿಂದ ಬಸ್ ಇನ್ನೂ ಹೊರಡದ ಕಾರಣ ಮದ್ಯದ ನಶೆಯಲ್ಲಿದ್ದ ಭೂಪನೋರ್ವನು ಕುಡಿದ ಮತ್ತಿನಲ್ಲಿದ್ದ ಡಿಪೋದಲ್ಲಿ ನಿಲ್ಲಿಸಿದ್ದ ಬಸ್ ಅನ್ನೇ ಚಲಾಯಿಸಿದ್ದಾನೆ. ಈ ಘಟನೆ ಬೆಳಗ್ಗೆ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಬೀದರ್ ಜಿಲ್ಲೆಯ ಕಾರಂಜಿ ನಿವಾಸಿ ಸೂರ್ಯವಂಶಿ ಬಸ್ ಚಲಾಯಿಸಿದ ಆರೋಪಿ. ಈತ ಇನ್ನೇನು ಬಸ್ ಹೊರಡಲಿದೆ ಎಂದು ಕಾದು ಬೇಸತ್ತು ಕೊನೆಗೆ ಕುಡಿದ ನಶೆಯಲ್ಲೇ ಬಸ್ ಚಲಾಯಿಸಿದ್ದಾನೆ. ಈ ಸಂದರ್ಭ ಒಳಗೆ ಕುಳಿತಿದ್ದ ಪ್ರಯಾಣಿಕರು ಭಯಭೀತರಾಗಿದ್ದಾರೆ.

ಈತ ಬಸ್ಸನ್ನು ನಿಲ್ಲಿಸುವ ಮೊದಲು ಮತ್ತೊಂದು ಬಸ್ ಹಾಗೂ ಜೀಪಿಗೆ ಡಿಕ್ಕಿ ಹೊಡೆದಿದ್ದಾನೆ. ಪೊಲೀಸರು ಈತನ್ನು ತಕ್ಷಣ ಬಂಧಿಸಿದ್ದಾರೆ. ಆತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Ads on article

Advertise in articles 1

advertising articles 2

Advertise under the article

ಸುರ