-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಚಂಡೀಗಢ: ಗಣೇಶ ವಿಗ್ರಹ ವಿಸರ್ಜಿಸಲು ಹೋದ 7 ಮಂದಿ ನೀರುಪಾಲು

ಚಂಡೀಗಢ: ಗಣೇಶ ವಿಗ್ರಹ ವಿಸರ್ಜಿಸಲು ಹೋದ 7 ಮಂದಿ ನೀರುಪಾಲು

ಚಂಡೀಗಢ: ಗಣೇಶ ವಿಗ್ರಹ ವಿಸರ್ಜನೆಯ ಸಂದರ್ಭ ಏಳು ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಧಾರುಣ ಘಟನೆಯೊಂದು ಹರ್ಯಾಣದಲ್ಲಿ ನಡೆದಿದೆ.

ಹರಿಯಾಣದ ಸೋನಿಪತ್‌ನಲ್ಲಿ ಮೂವರು ಹಾಗೂ ಮಹೇಂದ್ರಗಢದಲ್ಲಿ ನಾಲ್ವರು ಮುಳುಗಿ ಮೃತಪಟ್ಟಿದ್ದಾರೆ . ಆಗಸ್ಟ್ 31ರಿಂದ ಆರಂಭವಾಗಿರು 10 ದಿನಗಳ ಗಣೇಶಹಬ್ಬವು ಶುಕ್ರವಾರ ಗಣೇಶಮೂರ್ತಿ ವಿಸರ್ಜನೆ ಮಾಡುವುದರೊಂದಿಗೆ ಮುಕ್ತಾಯಗೊಂಡಿದೆ.  ಸೋನಿಪತ್‌ನ ಮಿಮರುರ ಘಾಟ್‌ನಲ್ಲಿ ಗಣೇಶಮೂರ್ತಿ ಮುಳುಗಿಸಲು ತೆರಳಿದ್ದ ವ್ಯಕ್ತಿ ಆತನ ಪುತ್ರ ಹಾಗೂ ಅಳಿಯ ನೀರುಪಾಲಾಗಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು , ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ . 

ಮಹೇಂದ್ರಗಢದ ಝಗದೋಳಿ ಗ್ರಾಮದಲ್ಲಿ 10 ದಿನಗಳಿಂದ ಪೂಜಿಸಿರುವ ಗಣೇಶಮೂರ್ತಿಯನ್ನು ನೀರಿಗೆ ಹಾಕಲು ಕಾಲುವೆಯೊಂದಕ್ಕೆ ಒಂಬತ್ತು ಮಂದಿ ತೆರಳಿದ್ದರು . ನೀರಿನ ರಭಸಕ್ಕೆ ಇವರು ಕೊಚ್ಚಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಇವರಲ್ಲಿ ಐವರನ್ನು ರಕ್ಷಣೆ ಮಾಡಲಾಗಿದೆ. ಈ ಪೈಕಿ ನಾಲ್ವರು ಮೃತಪಟ್ಟಿದ್ದಾರೆ. ಘಟನೆ ಬಗ್ಗೆ ಸಿಎಂ ಮನೋಹರಲಾಲ್ ಖಟ್ಟರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Ads on article

Advertise in articles 1

advertising articles 2

Advertise under the article

ಸುರ