-->

ಸುಳ್ಯ: ಜೀವದ ಹಂಗುತೊರೆದು ಶರೀಫ್ ಪ್ರಾಣ ಉಳಿಸಿದ ಸೋಮಶೇಖರ್!

ಸುಳ್ಯ: ಜೀವದ ಹಂಗುತೊರೆದು ಶರೀಫ್ ಪ್ರಾಣ ಉಳಿಸಿದ ಸೋಮಶೇಖರ್!

ಸುಳ್ಯ (ದಕ್ಷಿಣಕನ್ನಡ): ಕೋಮುಸೂಕ್ಷ್ಮ ಘಟನೆಗಳಿಂದ ಕಳೆದ ಕೆಲ ದಿನಗಳಿಂದ ದೊಡ್ಡ ಮಟ್ಟದಲ್ಲಿ ಸುದ್ದಿಯಲ್ಲಿದ್ದ ಸುಳ್ಯದಲ್ಲಿ ಇದೀಗ ಮಾನವೀಯತೆ ಮೆರೆದ ಘಟನೆಯೊಂದು ಸದ್ದಿಲ್ಲದೆ ಸುದ್ದಿಯಾಗಿದೆ. ಹಿಂದೂ ಯುವಕನೋರ್ವನು ಆಯತಪ್ಪಿ ನದಿಗೆ ಬಿದ್ದರುವ ಮುಸ್ಲಿಂ ಯುವಕನನ್ನು ರಕ್ಷಿಸಿರುವ ಘಟನೆ ಸುಬ್ರಮಣ್ಯ ಸಮೀಪದ ಹರಿಹರ ಪಳ್ಳತ್ತಡ್ಕ ಎಂಬಲ್ಲಿ ನಡೆದಿದೆ. 

ಪಳ್ಳತ್ತಡ್ಕ ಸೇತುವೆಯೊಂದರಲ್ಲಿ ಸಿಲುಕಿದ್ದ ಮರವನ್ನು ತೆರವುಗೊಳಿಸಲಾಗುತ್ತಿತ್ತು. ಈ ವೇಳೆ ಕ್ರೈನ್ ಆಪರೇಟರ್ ಶರೀಫ್ ಎಂಬವರು ಆಯತಪ್ಪಿ ನದಿಗೆ ಬಿದ್ದಿದ್ದಾರೆ. ನದಿಯಲ್ಲಿ ಪ್ರವಾಹೋಪಾದಿಯಲ್ಲಿ ನೆರೆ ಬಂದಿತ್ತು. ಆದರೂ ಅದನ್ನು ಲೆಕ್ಕಿಸದೆ ಸೋಮಶೇಖರ್ ಕಟ್ಟೆಮನೆ ಎಂಬವರು ನದಿಗೆ ಹಾರಿದ್ದಾರೆ. ಜೀವದ ಹಂಗು ತೊರೆದು ಈಜಿ ಶರೀಫ್ ಅವರನ್ನು ರಕ್ಷಿಸಿದ್ದಾರೆ. ಇವರ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ. 

ಆದರೆ ಕೋಮುಗಲಭೆಯ ಸುದ್ದಿ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿದ್ದರೆ ಕೋಮು ಸೌಹಾರ್ದ ಮೆರೆದಿರುವ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಲೇ ಇಲ್ಲ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article